alex Certify ಯುವಕನನ್ನು ಕೊಂದು ಪೊಲೀಸ್ ಠಾಣೆ ಎದುರಿಗೆ ಎಸೆದ ಪಾತಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುವಕನನ್ನು ಕೊಂದು ಪೊಲೀಸ್ ಠಾಣೆ ಎದುರಿಗೆ ಎಸೆದ ಪಾತಕಿ

ಕೊಲೆ, ಸುಲಿಗೆ, ಅತ್ಯಾಚಾರ, ಕಳ್ಳತನ ಮುಂತಾದ ಅಪರಾಧ ಮಾಡಿ, ಕಡೆಗೆ ತಾವಾಗೇ ಪೊಲೀಸರ ಬಳಿ ಹೋಗಿ ಶರಣಾಗಿರುವ ಹಲವು ಘಟನೆಗಳನ್ನ ನೀವು ಕೇಳಿರುತ್ತಿರಾ. ಆದರೆ ಇಲ್ಲೊಬ್ಬ ಕೊಲೆ ಮಾಡಿ ಆ ಶವವನ್ನ ಪೊಲೀಸ್ ಠಾಣೆ ಎದುರೇ ಎಸೆದಿದ್ದಾನೆ. ಈ ಘಟನೆ ಕೇರಳದಲ್ಲಿ ನಡೆದಿದ್ದು ಮೃತನ ಬಗ್ಗೆಯಾಗಲಿ, ಆರೋಪಿಯ ಬಗ್ಗೆ ಆಗಲಿ ಇನ್ನು ಯಾವುದೇ ಮಾಹಿತಿ ದೊರೆತಿಲ್ಲ.

ಯುವಕನೊಬ್ಬನನ್ನು ಕೊಲೆ ಮಾಡಿ ಆ ಶವವನ್ನು ಪೊಲೀಸ್ ಠಾಣೆಯ ಮುಂದೆ ಎಸೆಯಲಾಗಿತ್ತು. ಜನವರಿ 17 ರ ಸೋಮವಾರದಂದು ಕೊಟ್ಟಾಯಂನ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ.

ಶಬರಿಮಲೆಗೆ ಭೇಟಿ ನೀಡಿದ ನಟ ಅಜಯ್ ದೇವಗನ್

ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಶಿಲ್ಪಾ ದ್ಯಾವಯ್ಯ, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಆರೋಪಿಯು ಕೊಲೆಯನ್ನು ಒಪ್ಪಿಕೊಂಡಿದ್ದು, ಅವನು ಏಕಾಂಗಿಯಾಗಿ ಈ ಕೊಲೆ ಮಾಡಿ, ಪೊಲೀಸ್ ಸ್ಟೇಷನ್ ಎದುರು ಬಿಸಾಡಿರುವುದಾಗಿ ಹೇಳಿಕೆ ನೀಡಿದ್ದಾನೆ. ಆದರೆ ಅಪರಾಧದಲ್ಲಿ ಬೇರೆಯವರ ಕೈವಾಡವಿರುವ ಶಂಕೆ ಇದೆ ಎಂದು ಎಸ್‌ಪಿ ಹೇಳಿದ್ದಾರೆ. ಜೊತೆಗೆ ಪ್ರಕರಣದ ಹೆಚ್ಚಿನ ತನಿಖೆ ಮುಂದುವರಿದಿರುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...