alex Certify ವಿದ್ಯಾರ್ಥಿನಿಯನ್ನು ವೇದಿಕೆಗೆ ಆಹ್ವಾನಿಸಿದ್ದಕ್ಕೆ ಕೆಂಡಾಮಂಡಲರಾದ ಮುಸ್ಲಿಂ ವಿದ್ವಾಂಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿಯನ್ನು ವೇದಿಕೆಗೆ ಆಹ್ವಾನಿಸಿದ್ದಕ್ಕೆ ಕೆಂಡಾಮಂಡಲರಾದ ಮುಸ್ಲಿಂ ವಿದ್ವಾಂಸ

ಕೇರಳದ ಮಲಪ್ಪುರಂನ ರಾಮಪುರಂ ಎಂಬಲ್ಲಿ ಮದರಸಾ ಕಟ್ಟಡ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಅಲ್ಲಿ ಮುಸ್ಲಿಂ ವಿದ್ವಾಂಸ ಎಂ.ಟಿ. ಅಬ್ದುಲ್ಲಾ ಮುಸಲಿಯಾರ್ ಸೇರಿದಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ನಾಯಕ ಪಾಣಕ್ಕಾಡ್ ಸೈಯದ್ ಅಬ್ಬಾಸ್ ಅಲಿ ಶಿಹಾಬ್ ತಂಗಳ್ ಕೂಡಾ ಉಪಸ್ಥಿತರಿದ್ದರು.

ಆರು ತಿಂಗಳ ಬಳಿಕ ಆಸ್ಪತ್ರೆಯಿಂದ ಮರಳುತ್ತಿದ್ದ ಪತ್ನಿಗಾಗಿ ಕಾದು ಕುಳಿತ ವೃದ್ದ; ಭಾವುಕ ಕ್ಷಣದ ವಿಡಿಯೋ ವೈರಲ್

ಇದೇ ಸಮಾರಂಭದಲ್ಲಿ ಶಾಲೆಯಲ್ಲಿ ಇತರೆ ಚಟುವಟಿಕೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನ ವಿತರಣೆ ಮಾಡುವ ಕಾರ್ಯಕ್ರಮವಿತ್ತು. ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ತಮ್ಮ ತಮ್ಮ ಪ್ರಶಸ್ತಿಗಳನ್ನ ಸ್ವೀಕರಿಕೊಂಡು ಹೋಗುತ್ತಿದ್ದರು. ಅದೇ ರೀತಿ 10ನೇ ತರಗತಿಯ ಮುಸ್ಲಿಂ ವಿದ್ಯಾರ್ಥಿನಿ ಪ್ರಶಸ್ತಿಯನ್ನ ಸ್ವೀಕರಿಸಲು ವೇದಿಕೆ ಹತ್ತಿದ್ದಾಳೆ. ಆಗ ಮುಸಲಿಯಾರ್ ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಿಡಿಕಾರುವುದಕ್ಕೆ ಆರಂಭಿಸಿದ್ದಾರೆ.

ಎಂ.ಟಿ. ಅಬ್ದುಲ್ಲಾ ಮುಸಲಿಯಾರ್ ಹೊರತುಪಡಿಸಿ, ಅದೇ ವೇದಿಕೆ ಮೇಲೆ ಬೇರೆ ಬೇರೆ ಮುಸ್ಲಿಂ ವಿದ್ವಾಂಸರು ಸಹ ಇದ್ದರು. ಆದರೆ ಅವರಿಗೆ ಇದರ ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಆದರೆ ಮುಸಲಿಯಾರ್ ಮಾತ್ರ, ಆ ವಿದ್ಯಾರ್ಥಿನಿಗೆ ವೇದಿಕೆ ಹತ್ತಲು ಬಿಟ್ಟಿದ್ದೇಕೆ..? ಧರ್ಮದಲ್ಲಿ ಇದರ ಬಗ್ಗೆ ಏನು ಹೇಳಿದೆ..? ಆಕೆಯ ಪಾಲಕರನ್ನ ಕರೆಸಿ ಅಂತೆಲ್ಲ ಕೂಗಾಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...