alex Certify ಅದೃಷ್ಟ ಅಂದ್ರೆ ಇದಪ್ಪ….! ಸಾಲದ ನೋಟಿಸ್ ಬಂದ ದಿನವೇ 70 ಲಕ್ಷ ರೂ. ಲಾಟರಿ ಗೆದ್ದ ಮೀನುಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದಪ್ಪ….! ಸಾಲದ ನೋಟಿಸ್ ಬಂದ ದಿನವೇ 70 ಲಕ್ಷ ರೂ. ಲಾಟರಿ ಗೆದ್ದ ಮೀನುಗಾರ

ಅದೃಷ್ಟ ಎನ್ನುವುದು ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಯಾರಿಗೂ ಹೇಳಲು ಆಗುವುದಿಲ್ಲ. ಆದರೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಬಂದಾಗ ಅದರ ಕಿಮ್ಮತ್ತೇ ಬೇರೆ. ಇದೀಗ ಕೇರಳದ ಮೀನುಗಾರರೊಬ್ಬರಿಗೆ ಇದೇ ರೀತಿ ಆಗಿದೆ.

ಪುಕುಂಜೂ ಎಂಬ ಮೀನುಗಾರ ಬ್ಯಾಂಕಿನಿಂದ ಸಾಲ ಪಡೆದು ಮನೆ ನಿರ್ಮಿಸಿದ್ದರು. ಆದರೆ ಸಕಾಲಕ್ಕೆ ಕಂತು ಕಟ್ಟದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದು, ಒಂಬತ್ತು ಲಕ್ಷ ರೂಪಾಯಿ ಸಾಲ ಮರುಪಾವತಿಸದ ಕಾರಣ ಮನೆಯನ್ನು ಜಪ್ತಿ ಮಾಡುವುದಾಗಿ ಅವರಿಗೆ ಬ್ಯಾಂಕಿನಿಂದ ನೋಟಿಸ್ ಬಂದಿತ್ತು.

ಕಾಕತಾಳೀಯ ಎಂಬಂತೆ ಅದೇ ದಿನ ಅವರಿಗೆ ಕೇರಳ ರಾಜ್ಯ ಸರ್ಕಾರದ ಅಕ್ಷಯ ಲಾಟರಿಯಲ್ಲಿ ಬರೋಬ್ಬರಿ 70 ಲಕ್ಷ ರೂಪಾಯಿಗಳ ಬಹುಮಾನ ಬಂದಿದೆ. ಮನೆ ಜಫ್ತಿಯಾದರೆ ಕುಟುಂಬದೊಂದಿಗೆ ಬೀದಿಗೆ ಬೀಳುವ ಆತಂಕದಲ್ಲಿದ್ದ ಪುಕುಂಜೂ, ಈಗ ಸಾಲ ಮರುಪಾವತಿಸುವ ಜೊತೆಗೆ ಉಳಿದ ಹಣವನ್ನು ಉಳಿತಾಯ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...