alex Certify ಮನೆ ತೊರೆದ ಮಡದಿ: ಗಂಡನಿಂದ ದುಡುಕಿನ ನಿರ್ಧಾರ, ಹೃದಯ ವಿದ್ರಾವಕ ದೃಶ್ಯ ಕಂಡು ಮಮ್ಮಲ ಮರುಗಿದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ತೊರೆದ ಮಡದಿ: ಗಂಡನಿಂದ ದುಡುಕಿನ ನಿರ್ಧಾರ, ಹೃದಯ ವಿದ್ರಾವಕ ದೃಶ್ಯ ಕಂಡು ಮಮ್ಮಲ ಮರುಗಿದ ಜನ

ಚಿಕ್ಕೋಡಿ: ಪತ್ನಿ ತನ್ನಿಂದ ದೂರವಾಗಿದ್ದರಿಂದ ಮನನೊಂದ ವ್ಯಕ್ತಿ ಮಕ್ಕಳಿಬ್ಬರಿಗೆ ವಿಷವುಣಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದವಾಡ ಗ್ರಾಮದಲ್ಲಿ ನಡೆದಿದೆ.

38 ವರ್ಷದ ತಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಹೇಳಲಾಗಿದೆ. ತಾವು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಮಕ್ಕಳಾದ ನಿರಂಜನ(10), ಚಿನ್ನು(2) ಅವರಿಗೆ ವಿಷವುಣಿಸಿ ಮಗ್ಗುಲಲ್ಲೇ ಮಲಗಿಸಿಕೊಂಡಿದ್ದಾರೆ. ಮಕ್ಕಳಿಬ್ಬರನ್ನು ಮಗ್ಗುಲಲ್ಲೇ ಮಲಗಿಸಿಕೊಂಡು ತಮ್ಮಣ್ಣ ಮೃತಪಟ್ಟಿದ್ದು, ತಂದೆ ಪಕ್ಕದಲ್ಲೇ ಪ್ರಾಣಬಿಟ್ಟ ಮಕ್ಕಳನ್ನು ಕಂಡ ಗ್ರಾಮಸ್ಥರು ಮಮ್ಮಲ ಮರುಗಿದ್ದಾರೆ. ಸ್ಥಳಕ್ಕೆ ಹುಕ್ಕೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...