alex Certify ಸ್ವಾಮಿ ಇಂತಹ ವ್ಯಕ್ತಿ ಎಂದು ಊಹಿಸಿಯೇ ಇರಲಿಲ್ಲ: ರಾಧಿಕಾ ಕುಮಾರಸ್ವಾಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ವಾಮಿ ಇಂತಹ ವ್ಯಕ್ತಿ ಎಂದು ಊಹಿಸಿಯೇ ಇರಲಿಲ್ಲ: ರಾಧಿಕಾ ಕುಮಾರಸ್ವಾಮಿ

ಬಿಜೆಪಿ ಹಾಗೂ ಆರ್​ಎಸ್​ಎಸ್​ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್​ ಅಲಿಯಾಸ್​​ ಸ್ವಾಮಿ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಥಳುಕು ಹಾಕಿಕೊಂಡಿದೆ. ಬಂಧಿತ ಯುವರಾಜನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ ಖಾತೆಗೆ ವರ್ಗಾವಣೆಯಾಗಿರುವ 1.25 ಕೋಟಿ ರೂಪಾಯಿ ಸಂಬಂಧ ಸ್ವತಃ ರಾಧಿಕಾ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಡಾಲರ್ಸ್​ ಕಾಲೋನಿಯ ತಮ್ಮ ನಿವಾಸದಲ್ಲಿ ಈ ವಿಚಾರವಾಗಿ ಮಾತನಾಡಿದ ನಟಿ ರಾಧಿಕಾ ಕುಮಾರಸ್ವಾಮಿ, ನಮ್ಮ ಕುಟುಂಬಕ್ಕೂ ಹಾಗೂ ಸ್ವಾಮಿಗೂ 17 ವರ್ಷಗಳ ಕಾಲದ ನಂಟಿದೆ. ನಮ್ಮ ತಂದೆ ಸಾವಿನ ಬಗ್ಗೆ ಅವರು ನುಡಿದಿದ್ದ ಭವಿಷ್ಯ ನಿಜವಾದ ಬಳಿಕ ನಮ್ಮ ಕುಟುಂಬಕ್ಕೆ ಇನ್ನಷ್ಟು ಹತ್ತಿರವಾಗಿದ್ದರು. ಸ್ವಾಮಿ ಪತ್ನಿಯ ಹೆಸರಲ್ಲಿ ಪ್ರೊಡಕ್ಷನ್​ ಹೌಸ್ ಇದೆ. ಹೀಗಾಗಿ ಅವರು ಐತಿಹಾಸಿಕ ಸಿನಿಮಾ ಮಾಡೋದ್ರ ಬಗ್ಗೆ ನನ್ನೊಡನೆ ಚರ್ಚೆ ಮಾಡಿದ್ದರು. ಮುಂದಿನ ವರ್ಷ ನಿಮ್ಮ ಡೇಟ್ಸ್​ ಬೇಕು ಎಂದು ಹೇಳಿದ್ದ ಸ್ವಾಮಿ ನನ್ನ ಖಾತೆಗೆ 15 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಸಲ್ಲಿಸಲೂ ನಾನು ಸಿದ್ಧಳಿದ್ದೇನೆ. ಈ ಸಿನಿಮಾವನ್ನ ಸ್ವಾಮಿ ಅವರ ಭಾವ ನಿರ್ಮಾಣ ಮಾಡುವವರಿದ್ದರು. ನನಗೆ ಸ್ವಾಮಿ 1.25 ಕೋಟಿ ರೂಪಾಯಿ ನೀಡಿದ್ದಾರೆ ಅನ್ನೋದು ಕೇವಲ ವದಂತಿ. ಅಲ್ಲದೇ ನನ್ನ ಸಹೋದರನ ಖಾತೆಗೂ ಸ್ವಾಮಿ ಹಣ ಹಾಕಿಲ್ಲ.

ಡಿಸೆಂಬರ್​ ವೇಳೆ ನಿಮಗೆ ಅಶುಭ ಘಳಿಗೆ ಕಾದಿದೆ ಎಂದು ಸ್ವಾಮಿ ಭವಿಷ್ಯ ನುಡಿದಿದ್ದರು. ಅಲ್ಲದೇ ಫೆಬ್ರವರಿ ಬಳಿಕ ಶುಕ್ರದೆಸೆ ಬರಲಿದೆ ಅಂತಾನೂ ಹೇಳಿದ್ರು. ಆದರೆ ಅವರಿಂದಲೇ ನನಗೆ ಈ ಆರೋಪ ಎದುರಿಸಬೇಕಾದ ದಿನ ಬರುತ್ತೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ರು.

ಸಿನಿಮಾ ನಿರ್ಮಾಣಕ್ಕಾಗಿ ಸ್ವಾಮಿ 15 ಲಕ್ಷ ವರ್ಗಾವಣೆ ಮಾಡಿದ್ದರೆ ಇನ್ನೊಬ್ಬರ ಖಾತೆಯಿಂದ 60 ಲಕ್ಷ ರೂಪಾಯಿ ಬಂದಿದೆ. ಆದರೆ ಈ 75 ಲಕ್ಷ ರೂಪಾಯಿಗೆ ಅಗ್ರಿಮೆಂಟ್​ ಮಾಡಿಕೊಂಡಿಲ್ಲ. ಯುವರಾಜ್​ ಜೊತೆ ಸಿನಿಮಾ ನಿರ್ಮಾಣ ಬಿಟ್ಟು ನನಗೆ ಬೇರೆ ಯಾವುದೇ ವ್ಯವಹಾರ ಇಲ್ಲ ಎಂದು ಸ್ಪಷ್ಟನೆ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...