alex Certify BIG NEWS: ರಾಧಿಕಾರಿಂದ ದೂರವಾಗಲು ಕುಮಾರಸ್ವಾಮಿ ಯಾವ ಪಾಪದ ಹಣ ಕೊಟ್ಟರು….? ಹೆಚ್. ಡಿ. ಕೆ. ವಿರುದ್ಧ ಮಾಜಿ ಶಾಸಕ ಕೆ.ರಾಜು ಗಂಭೀರ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಧಿಕಾರಿಂದ ದೂರವಾಗಲು ಕುಮಾರಸ್ವಾಮಿ ಯಾವ ಪಾಪದ ಹಣ ಕೊಟ್ಟರು….? ಹೆಚ್. ಡಿ. ಕೆ. ವಿರುದ್ಧ ಮಾಜಿ ಶಾಸಕ ಕೆ.ರಾಜು ಗಂಭೀರ ಆರೋಪ

ರಾಮನಗರ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರುತ್ತಿದ್ದು, ನಾನು ರಾಜಕೀಯಕ್ಕೆ ಬಂದಾಗ ಹೆಚ್.ಡಿ.ಕುಮಾರಸ್ವಾಮಿ ಎಲ್ಲಿದ್ದರೋ ಗೊತ್ತಿಲ್ಲ. ದೇವೇಗೌಡರ ಮಗನೆಂಬ ಕಾರಣಕ್ಕೆ ಜನ ಅವರನ್ನು ಗುರುತಿಸಿದರು. ನಾವೇ ಅವರನ್ನು ರಾಮನಗರಕ್ಕೆ ಕರೆತಂದೆವು ಅವರು ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟಿ ಯಶಸ್ವಿಯಾದರು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಶಾಸಕ ಕೆ.ರಾಜು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಬೆಂಬಲದಿಂದ ಹೆಚ್.ಡಿ.ಕುಮಾರಸ್ವಾಮಿ ಎರಡನೇ ಬಾರಿ ಸಿಎಂ ಆದರು. ಆನಂತರ ಕುಮಾರಸ್ವಾಮಿ ಹಣ ಮಾಡುವ ದಂಧೆಗೆ ಇಳಿದರು. ನೂರಾರು ಕೋಟಿ ಸುರಿದರೂ ಮಂಡ್ಯದಲ್ಲಿ ಕುಮಾರಸ್ವಾಮಿಗೆ ಮಗನನ್ನು ಗೆಲ್ಲಿಸಲು ಆಗಲಿಲ್ಲ. ದೇವೇಗೌಡರು ಸೋಲಲು ಕೂಡ ಕುಮಾರಸ್ವಾಮಿಯೇ ಕಾರಣ. ಕುಮಾರಸ್ವಾಮಿಯವರ ಅಕ್ರಮಗಳನ್ನು ಕಂಡು ಜನರು ಅವರನ್ನು ಸೋಲಿಸಿದರು ಎಂದು ಆರೋಪಿಸಿದ್ದಾರೆ.

ವಿಮಾನದಲ್ಲಿ ಹಾವಿನ ಮರಿ ಕಂಡು ಬೆಚ್ಚಿ ಬಿದ್ದ ಪ್ರಯಾಣಿಕರು…..!

ಸಿಎಂ ಸ್ಥಾನದಲ್ಲಿದ್ದವರು ನಟಿ ರಾಧಿಕಾ ಅವರನ್ನು ಮದುವೆಯಾದರು. ಬಳಿಕ ರಾಧಿಕಾ ಕುಮಾರಸ್ವಾಮಿಯವರಿಂದ ದೂರವಾಗಲು ನೂರಾರು ಕೋಟಿ ಹಣ ಕೊಟ್ಟರು. ಇದು ಯಾವ ಪುಣ್ಯದ ಹಣ? ಇವರು ರಾಧಿಕಾರಿಂದ ದೂರವಾಗಲು ಯಾವ ಪಾಪದ ಹಣ ಕೊಟ್ಟರು? ಎಲ್ಲಿಂದ ಹಣ ಬಂತು ಎಂಬುದನ್ನು ಹೆಚ್ ಡಿ ಕೆ ಜನರ ಮುಂದೆ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...