ಬೆಂಗಳೂರು: ಪಾದರಾಯನಪುರ ಜನರನ್ನು ಮನೆಗೆ ಸೇರಿಸಿಕೊಳ್ಳಬೇಡಿ ಎಂದು ಬೆಂಗಳೂರಿನ ಗಂಗೊಂಡನಹಳ್ಳಿ ಮಸೀದಿಯ ಮೈಕ್ ನಲ್ಲಿ ಅನೌನ್ಸ್ ಮಾಡಲಾಗಿದೆ.
ಪಾದರಾಯನಪುರದವರು ನಿಮ್ಮ ಮನೆಯಲ್ಲಿ ಇದ್ದರೆ ಅವರನ್ನು ವಾಪಸ್ ಕಳುಹಿಸಿ. ನಮ್ಮ ಏರಿಯಾ ಸುರಕ್ಷಿತವಾಗಿರಲು ಸಹಕರಿಸಿ ಎಂದು ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿಯವರು ಹೇಳಿದಂತೆ ನಾವು ಕೇಳಬೇಕಿದೆ. ನಮ್ಮ ಒಳ್ಳೆಯದಕ್ಕೆ ಅವರು ನಿಯಮವನ್ನು ಜಾರಿ ಮಾಡಿದ್ದಾರೆ. ಹೀಗಾಗಿ ಪಾದರಾಯನಪುರದವರನ್ನು ಮನೆಯೊಳಗೆ ಸೇರಿಸಬೇಡಿ. ಅವರು ನಿಮ್ಮ ಮನೆಯಲ್ಲಿದ್ದರೆ ಪೊಲೀಸರಿಗೆ ತಿಳಿಸಿ ಎಂದು ಹೇಳಲಾಗಿದೆ.
ಬೆಂಗಳೂರಿನ ಗಂಗೊಂಡನಹಳ್ಳಿಯಲ್ಲಿ ಸುಮಾರು 16 ಮಸೀದಿಗಳಿದ್ದು, ಎಲ್ಲಾ ಮುಖಂಡರು ಚರ್ಚಿಸಿ ಇಂತಹ ಪ್ರಕಟಣೆ ನೀಡಲಾಗಿದ್ದು, ನಮ್ಮೆಲ್ಲರ ಒಳ್ಳೆಯದಕ್ಕೆ ನಿಯಮ ಜಾರಿ ಮಾಡಿದ್ದು ಪಾದರಾಯನಪುರ ಜನರನ್ನು ಮನೆಗೆ ಸೇರಿಸಿಕೊಳ್ಳಬೇಡಿ ಎಂದು ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ.