ಬೆಂಗಳೂರು: ಬಿಎಂಟಿಸಿ, ಕೆಎಸ್ಆರ್ಟಿಸಿ ನೌಕರರಿಗೆ ಇನ್ನು ಸಂಬಳ ಆಗಿಲ್ಲ. ಲಾಕ್ಡೌನ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ಸಾರಿಗೆ ನಿಗಮಗಳಿಗೆ ನಷ್ಟವಾಗಿದ್ದು, ಆದಾಯವಿಲ್ಲದ ಕಾರಣ ಈ ತಿಂಗಳ ಸಂಬಳ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ.
ವೇತನ ವಿಳಂಬವಾದರೂ ಪೂರ್ತಿ ಸಂಬಳ ಬರುವುದು ಅನುಮಾನವೆನ್ನಲಾಗಿದೆ. ಚಾಲಕರು, ನಿರ್ವಾಹಕರಿಗೆ ಶೇಕಡ 75 ರಷ್ಟು ಸಂಬಳ, ಅಧಿಕಾರಿಗಳಿಗೆ ಶೇಕಡ 50 ರಷ್ಟು ಸಂಬಳ ನೀಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಲಾಕ್ ಡೌನ್ ನಿಂದಾಗಿ ಸುಮಾರು ಒಂದೂವರೆ ತಿಂಗಳಿಂದ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಆದಾಯವಿಲ್ಲದೇ ವೇತನ ನೀಡುವುದು ಕಷ್ಟವಾಗಿದೆ. ಈ ಕಾರಣದಿಂದ ವೇತನ ಕಡಿತ ಮಾಡಲಾಗುವುದು ಎನ್ನಲಾಗಿದೆ.