ಲಾಕ್ ಡೌನ್ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಆಹಾರಕ್ಕೆ ಸಮಸ್ಯೆ ಆಗಬಾರದೆಂದು ದೇಶಾದ್ಯಂತ ಸರ್ಕಾರ, ದಿನಸಿ ವಸ್ತುಗಳನ್ನು ನೀಡುತ್ತಿದೆ.
ರಾಜ್ಯದಲ್ಲೂ ಸಹ ವಲಸೆ ಕಾರ್ಮಿಕರಿಗೆ ಅಕ್ಕಿ ಸೇರಿ ವಿವಿಧ ಪದಾರ್ಥಗಳನ್ನು ವಿತರಿಸಲಾಗಿದೆ. ಇದೇ ವೇಳೆ ಮಂಗಳೂರಿನಲ್ಲಿ ವಲಸೆ ಕಾರ್ಮಿಕರು ಪಡೆದ ಅಕ್ಕಿ ಮುಗ್ಗಲು ಸಹಿತ ಹುಳು ಕಂಡುಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ನಲ್ಲಿರುವ ತಮ್ಮ ಮನೆಗಳಿಗೆ ಕರೆದೊಯ್ಯಲು ಸಾರಿಗೆ ವ್ಯವಸ್ಥೆ ಮಾಡಬೇಕೆಂದು ವಲಸೆ ಕಾರ್ಮಿಕರ ಒತ್ತಾಯಿಸಿದಾಗ ಅವರುಗಳಿಗೆ ವಾಸ್ತವ್ಯ ಕಲ್ಪಿಸಿ ಕಾರ್ಮಿಕ ಇಲಾಖೆಯಿಂದ ಅಕ್ಕಿಯನ್ನು ವಿತರಿಸಲಾಗಿತ್ತಂತೆ. ಈ ಅಕ್ಕಿ ಮನುಷ್ಯ ಬಳಕೆಗೆ ಯೋಗ್ಯವಾಗಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಗಸ್ಟಿನ್ ವರ್ಕಿ ಎಂಬುವರು ಹುಳ ಹಿಡಿದ ಅಕ್ಕಿಯ ವಿಡಿಯೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದು, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಶೇಷವೆಂದರೆ, ಸರ್ಕಾರದಿಂದ ನೀಡಲಾಗುತ್ತಿರುವ ಅಕ್ಕಿ ಕಳಪೆಯಾಗಿದೆ ಎಂಬ ಮೊದಲ ದೂರು ಇದಾಗಿದೆ.