alex Certify ಸಿನಿಮಾ ನಿರ್ಮಾಪಕ, ‘ಬಿಗ್ ಬಾಸ್’ ಸ್ಪರ್ಧಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ನಿರ್ಮಾಪಕ, ‘ಬಿಗ್ ಬಾಸ್’ ಸ್ಪರ್ಧಿ ಅರೆಸ್ಟ್

ಉಡುಪಿ: ದಲಿತ ಯುವಕನ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಸಿನಿಮಾ ನಿರ್ಮಾಪಕ ಮತ್ತು ತೆಲುಗು ‘ಬಿಗ್ ಬಾಸ್’ ಮೊದಲ ಆವೃತ್ತಿಯ ಸ್ಪರ್ಧಿ ನೂತನ್ ನಾಯ್ಡುನನ್ನು ಪೊಲೀಸರು ಬಂಧಿಸಿದ್ದಾರೆ.

ವಿಶಾಖಪಟ್ಟಣಂ ಪೋಲಿಸರಿಂದ ಮಾಹಿತಿ ಪಡೆದುಕೊಂಡ ಉಡುಪಿ ಪೊಲೀಸರು ನಿನ್ನೆ ಕಾರ್ಯಾಚರಣೆ ನಡೆಸಿ ಉಡುಪಿ ರೈಲ್ವೆ ನಿಲ್ದಾಣದಲ್ಲಿ ನೂತನ್ ನಾಯ್ಡುನನ್ನು ಬಂಧಿಸಿದ್ದಾರೆ. ಯುವಕನ ಮೇಲೆ ದೌರ್ಜನ್ಯ ನಡೆಸಿದ ನಂತರ ಉಡುಪಿಗೆ ಆಗಮಿಸಿದ್ದ ನೂತನ್ ನಾಯ್ಡು ಮುಂಬೈಗೆ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿದೆ.

ಉಡುಪಿ ಮಣಿಪಾಲ ಠಾಣೆ ಪೊಲೀಸರು ನೂತನ್ ನಾಯ್ಡುನನ್ನು ಸುತ್ತುವರೆದ ಸಂದರ್ಭದಲ್ಲಿ ತನ್ನ ಬಳಿ ಇದ್ದ ಮೊಬೈಲ್ ಎಸೆಯಲು ಯತ್ನ ನಡೆಸಿದ್ದಾನೆ. ಆತನನ್ನು ವಶಕ್ಕೆ ಪಡೆದ ಪೊಲೀಸರು 4 ಮೊಬೈಲ್ ಫೋನ್ ಜಪ್ತಿ ಮಾಡಿ ಆಂಧ್ರಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಭಾನುವಾರ ಉಡುಪಿಗೆ ಆಗಮಿಸಿದ ವಿಶಾಖಪಟ್ಟಣ ಪೊಲೀಸರು ನೂತನ್ ನಾಯ್ಡುನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಕರೆದುಕೊಂಡು ಹೋಗಿದ್ದಾರೆನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...