ಬೆಂಗಳೂರು: ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿರುವುದರಿಂದ ಸರ್ಕಾರಕ್ಕೆ ಆದಾಯವಿಲ್ಲದೆ ನೌಕರರ ವೇತನ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಆದಾಯ ಇಲ್ಲದೆ ಸಂಕಷ್ಟದ ಸ್ಥಿತಿ ಇದ್ದು, ಇಂತಹ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವೇತನ ಪಾವತಿ ಕಷ್ಟಸಾಧ್ಯ. ರಾಜ್ಯ ಸರ್ಕಾರಿ ನೌಕರರ ವೇತನವನ್ನು ಮುಂದಿನ ತಿಂಗಳಲ್ಲಿ ಕಡಿತ ಮಾಡುವುದು ಅನಿವಾರ್ಯವಾಗಿದೆ ಎನ್ನಲಾಗಿದೆ.
ಆದಾಯವಿಲ್ಲದೆ ರಾಜ್ಯ ಸರ್ಕಾರ ಕಂಗೆಟ್ಟಿದ್ದರೂ ಹಣಕಾಸು ಇಲಾಖೆ ಅಧಿಕಾರಿಗಳ ವಿರೋಧದ ನಡುವೆಯೂ ಏಪ್ರಿಲ್ ತಿಂಗಳಲ್ಲಿ ಪೂರ್ಣ ಸಂಬಳ ಪಾವತಿ ಮಾಡಲಾಗಿದೆ. ಮೇ ತಿಂಗಳ ವೇತನವನ್ನು ಕಷ್ಟಪಟ್ಟು ಪಾವತಿಸಬಹುದು. ಆದರೆ, ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ವೇತನ ಪಾವತಿಸುವ ಸಾಧ್ಯತೆಯಿಲ್ಲ. ವೇತನ ಕಡಿತ ಅನಿವಾರ್ಯವಾಗಬಹುದು ಎಂದು ಹೇಳಲಾಗಿದೆ.