alex Certify 30 ಸಾವಿರ ರೂ.ಗಾಗಿ ಕೊಲೆ ಮಾಡಿ ಜೈಲು ಸೇರಿದ ಕೋಟ್ಯಾಧಿಪತಿಯ ಪುತ್ರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

30 ಸಾವಿರ ರೂ.ಗಾಗಿ ಕೊಲೆ ಮಾಡಿ ಜೈಲು ಸೇರಿದ ಕೋಟ್ಯಾಧಿಪತಿಯ ಪುತ್ರ..!

30000 ರೂಪಾಯಿ ಸಾಲ ತೀರಿಸಲು 22 ವರ್ಷದ ಯುವಕ 65 ವರ್ಷದ ವೃದ್ಧನನ್ನ ಕೊಲೆ ಮಾಡಿ ಜೈಲು ಸೇರಿದ ಘಟನೆ ಬೆಂಗಳೂರಿನ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಆರೋಪಿ ರಾಕೇಶ್​ ವೃದ್ಧನಿಗೆ ಬ್ಯಾಟ್​ನಿಂದ ಥಳಿಸಿ ಕೊಲೆ ಮಾಡಿದ್ದಾನೆ.

ಪೊಲೀಸರು ಆರೋಪಿ ರಾಕೇಶ್​ನನ್ನ ಸೋಮವಾರ ಬಂಧಿಸಿದ್ದಾರೆ. ಹಾಗೂ ಆತ ವೃದ್ಧನ ಕೈಯಿಂದ ಕಸಿದುಕೊಂಡು ಹೋಗಿದ್ದ ಎಲ್ಲಾ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ರಾಕೇಶ್​​ ಶ್ರೀಮಂತ ಮನೆತನದ ಯುವಕನಾಗಿದ್ದು ಆತನ ತಂದೆ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು ಎನ್ನಲಾಗಿದೆ.

ಜನವರಿ 15ರಂದು ಈ ಘಟನೆ ಸಂಭವಿಸಿದ್ದು ಮೃತ ಮೂರ್ತಿಯನ್ನ ಹಿಂಬದಿಯಿಂದ ಬಂದು ದಾಳಿ ನಡೆಸಿದ ರಾಕೇಶ್​ ಬ್ಯಾಟ್​ನಿಂದ ಥಳಿಸಿದ್ದಾನೆ ಎನ್ನಲಾಗಿದೆ. ಬಳಿಕ ಮೃತ ಮೂರ್ತಿಯ ಕುತ್ತಿಗೆಯಲ್ಲಿದೆ ಚಿನ್ನಾಭರಣಗಳನ್ನ ಕಸಿದುಕೊಂಡಿದ್ದ. ಬಳಿಕ ಮೂರ್ತಿಯ ಮೃತದೇಹವನ್ನ ಪೊದೆಗಳ ನಡುವೆ ಎಸೆದು ಸ್ಥಳದಿಂದ ಪರಾರಿಯಾಗಿದ್ದ . ವೃದ್ಧ ಮೂರ್ತಿ ಮನೆಗೆ ವಾಪಸ್ಸಾಗದ್ದನ್ನ ಕಂಡ ಕುಟುಂಬಸ್ಥರು ಪೊಲೀಸ್​ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳನ್ನ ಆಧರಿಸಿದ ಪೊಲೀಸರು ರಾಕೇಶ್​ನನ್ನ ವಿಚಾರಣೆಗೆ ಕರೆದಿದ್ದಾರೆ. ಈ ವೇಳೆ ಆತ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದು ಪೊಲೀಸರು ಆತನನ್ನ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...