alex Certify ಶಾಕಿಂಗ್: ಬಾಲಕನ ಜೀವ ತೆಗೆದ ಜೋಕಾಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ಬಾಲಕನ ಜೀವ ತೆಗೆದ ಜೋಕಾಲಿ

ಬೆಂಗಳೂರು: ಹೊರವಲಯದ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ದರ್ಗಾಜೋಗಹಳ್ಳಿಯ ಬಾಲಕನೊಬ್ಬ ಜೋಕಾಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಮಂಜುನಾಥ್ ಅವರ ಪುತ್ರ ವಿಶ್ವಾಸ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ವಿಶ್ವಾಸ್ ಆನ್ಲೈನ್ ತರಗತಿ ಕಾರಣ ರೂಮ್ ನಲ್ಲಿ ಪಾಠ ಕೇಳುತ್ತಿದ್ದ. ಅದೇ ರೂಮ್ ನಲ್ಲಿ ಎರಡು ವರ್ಷದ ಮಗು ಮಲಗಿಸಲು ಜೋಳಿಗೆ ಕಟ್ಟಿದ್ದು ಜೋಳಿಗೆಯಲ್ಲಿ ಕುಳಿತು ಪಾಠ ಕೇಳುತ್ತಿದ್ದ ವಿಶ್ವಾಸ್ ಕತ್ತು ಜೋಳಿಗೆಗೆ ಸಿಲುಕಿ ಮೃತಪಟ್ಟಿದ್ದಾನೆ.

ಆನ್ಲೈನ್ ತರಗತಿ ಸಮಯ ಮುಗಿದರೂ ವಿಶ್ವಾಸ್ ಹೊರಗೆ ಬರದಿದ್ದಾಗ ಮನೆಯವರು ರೂಮಿನ ಬಾಗಿಲು ತೆಗೆದು ನೋಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...