ಬೆಂಗಳೂರು: ಮದ್ಯ, ಗುಟ್ಕಾ, ಸಿಗರೇಟ್ ಗಾಗಿ ಕ್ವಾರಂಟೈನ್ ನಲ್ಲಿರುವ ಬಿಹಾರ ಕೂಲಿಕಾರ್ಮಿಕರು ಗಲಾಟೆ ಮಾಡಿದ್ದಾರೆ.
ರಾತ್ರಿ ಗುಟ್ಕಾ ಮತ್ತು ಎಣ್ಣೆಗಾಗಿ ಗಲಾಟೆ ನಡೆಸಿ ಸಿಗರೇಟ್ ಕೊಡಲೇಬೇಕೆಂದು ಒತ್ತಾಯಿಸಿದ್ದಾರೆ. ಹೊಂಗಸಂದ್ರ ಬಿಹಾರಿ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದ್ದು ಗುಟ್ಕಾ, ಸಿಗರೇಟ್, ಮದ್ಯಕ್ಕಾಗಿ ಗಲಾಟೆ ನಡೆಸಿದ್ದಾರೆ. ಒಳ್ಳೆಯ ಊಟ ಕೊಟ್ಟರೂ ಊಟ ಬೇಡ ಗುಟ್ಕಾ, ಸಿಗರೇಟ್ ಕೊಡಿ ಎಂದು ಬಲವಂತ ಮಾಡಿ ರಾತ್ರಿ ಪೂರ್ತಿ ಸುತ್ತಾಡಿದ್ದಾರೆ. ಇದರಿಂದಾಗಿ ಬಿಬಿಎಂಪಿ ಅಧಿಕಾರಿಗಳು ಹೈರಾಣಾಗಿದ್ದಾರೆ ಎನ್ನಲಾಗಿದೆ.
ಹೊಂಗಸಂದ್ರದಲ್ಲಿ 30 ಕ್ಕೂ ಹೆಚ್ಚು ಜನರಿಗೆ ಕೊರೋನಾ ಸೋಂಕು ತಗುಲಿದ್ದು, 200 ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಬಿಹಾರ ಮೂಲದ ವ್ಯಕ್ತಿಗಳನ್ನು ಪಿಜಿ ನಿವಾಸದಲ್ಲಿ ಇರಿಸಿ ಮೂಲ ಸೌಕರ್ಯ ಒದಗಿಸಲಾಗಿದೆ. ಆದರೆ, ಇವರಲ್ಲಿ ಕೆಲವರು ಗುಟ್ಕಾ, ಸಿಗರೇಟ್, ಮದ್ಯಕ್ಕಾಗಿ ಗಲಾಟೆ ಮಾಡಿದ್ದಾರೆ. ಬಿಬಿಎಂಪಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ ಎಂದು ಹೇಳಲಾಗಿದೆ.