alex Certify ತಲಕಾವೇರಿ ಅರ್ಚಕನ ಪುತ್ರಿಯರಿಗೆ ಬದಲಾದ ಹೆಸರಿನಲ್ಲಿಯೇ ‘ಚೆಕ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲಕಾವೇರಿ ಅರ್ಚಕನ ಪುತ್ರಿಯರಿಗೆ ಬದಲಾದ ಹೆಸರಿನಲ್ಲಿಯೇ ‘ಚೆಕ್’

ಕೊಡಗಿನ ತಲಕಾವೇರಿಯಲ್ಲಿ ಅರ್ಚಕರಾಗಿದ್ದ ನಾರಾಯಣಾಚಾರ್ ಅವರು ಬೆಟ್ಟ ಕುಸಿತದಿಂದಾಗಿ ಮೃತಪಟ್ಟಿದ್ದರು.

ಈ ಸಂದರ್ಭದಲ್ಲಿ ವಿದೇಶದಲ್ಲಿದ್ದ ಅವರ ಪುತ್ರಿಯರು ಭಾರತಕ್ಕೆ ಆಗಮಿಸಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಿದ್ದರು.

ನಾರಾಯಣಾಚಾರ್ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿದ್ದು, ಅವರ ಪುತ್ರಿಯರಾದ ಶಾರದಾ ಆಚಾರ್ ಹಾಗೂ ನಮಿತಾ ಆಚಾರ್ ಹೆಸರಿನಲ್ಲಿ ಚೆಕ್ ನೀಡಲಾಗಿತ್ತು.

ಆದರೆ ಮತಾಂತರಗೊಂಡಿದ್ದ ಈ ಇಬ್ಬರೂ ತಮ್ಮ ಹೆಸರುಗಳನ್ನು ಕ್ರಮವಾಗಿ ಶನೋನ್ ಫರ್ನಾಂಡೀಸ್ ಹಾಗೂ ನಮಿತ ನಝರತ್ ಎಂದು ಬದಲಾಯಿಸಿಕೊಂಡಿದ್ದು, ಇದು ಗೊಂದಲಕ್ಕೆ ಕಾರಣವಾಗಿತ್ತು.

ತಮಗೆ ಬದಲಾದ ಹೆಸರಿನಲ್ಲಿ ಚೆಕ್ ನೀಡುವಂತೆ ನಾರಾಯಣಾಚಾರ್ಯ ಪುತ್ರಿಯರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಇದಕ್ಕೆ ಈಗ ಸಮ್ಮತಿಸಲಾಗಿದೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...