alex Certify ಸಿಎಂ ಗಮನ ಸೆಳೆದ ಸ್ವಿಮ್ಮರ್ ಬಳೆ….! ಬಂಗಾರದ್ದಾ ಅಂದ್ರು ಯಡಿಯೂರಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಎಂ ಗಮನ ಸೆಳೆದ ಸ್ವಿಮ್ಮರ್ ಬಳೆ….! ಬಂಗಾರದ್ದಾ ಅಂದ್ರು ಯಡಿಯೂರಪ್ಪ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವಿಮ್ಮರ್ ಖುಷಿ ದಿನೇಶ್ ಅವರ ಕೈ ಬಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಗಮನ ಸೆಳೆದಿದೆ.

ವೇದಿಕೆ ಮೇಲೆ ಪ್ರಶಸ್ತಿ ಪ್ರದಾನ ಮಾಡುವ ವೇಳೆ ಸ್ವಿಮ್ಮಿಂಗ್ ನಲ್ಲಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿರುವ ಖುಷಿ ದಿನೇಶ್ ಅವರ ಬಳೆ ನೋಡಿದ ಸಿಎಂ, ಏನಮ್ಮಾ…? ಎಲ್ಲಿ ಮಾಡಿಸಿಕೊಂಡೆ ಈ ಬಳೆ? ಬಳೆ ಡಿಸೈನ್ ಚೆನ್ನಾಗಿದೆ. ಬಂಗಾರದ ಬಳೆನಾ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಖುಷಿ, ಇದು ಬಂಗಾರದ ಬಳೆಯಲ್ಲ, ಆರ್ಟಿಫಿಷಿಯಲ್ ಬಳೆ ಎಂದಿದ್ದಾರೆ. ಅದಕ್ಕೆ ಇಂಥಹ ಪ್ರಶಸ್ತಿ ಪುರಸ್ಕಾರ ಸಮಾರಂಭಗಳಿಗೆ ಬರುವಾಗ ಆರ್ಟಿಫಿಷಿಯಲ್ ಬಳೆಗಳನ್ನು ಹಾಕಿ ಬರಬಾರದು, ಬಂಗಾರದ ಬಳೆ ಹಾಕಿಕೊಂಡು ಬರಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...