alex Certify ಜೀವನದಲ್ಲಿ ʼಯಶಸ್ಸುʼ ಸಾಧಿಸಲು ಈ ವಸ್ತುಗಳನ್ನು ದಾನ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ʼಯಶಸ್ಸುʼ ಸಾಧಿಸಲು ಈ ವಸ್ತುಗಳನ್ನು ದಾನ ಮಾಡಿ ನೋಡಿ

ಮನುಷ್ಯನೆಂದ ಮೇಲೆ ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಈ ಕಷ್ಟಗಳೆಲ್ಲಾ ಕಳೆದು ಜೀವನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಏಳಿಗೆ ಸಾಧಿಸಬೇಕು ಎಂಬ ಆಸೆ ಹಲವರಲ್ಲಿರುತ್ತದೆ. ಅಂತವರು ಈ ದಾನಗಳನ್ನು ಮಾಡಿದರೆ ಜೀವನದಲ್ಲಿ ಇಷ್ಟಾರ್ಥಗಳು ಈಡೇರುತ್ತದೆ.

ಮನೆಗೆ ಮುತ್ತೈದೆಯರನ್ನು ಕರೆದು 2 ವೀಳ್ಯದೆಲೆ, ಸ್ವಲ್ಪ ಅಡಿಕೆ, ಹೂ, ಹಣ್ಣು, ಬಟ್ಟೆ ಮತ್ತು ಬಳೆಗಳು, ಅರಶಿನ ಕುಂಕುಮ ಇಟ್ಟು ತಾಂಬೂಲದ ರೂಪದಲ್ಲಿ ದಾನ ಮಾಡಬೇಕು. ಇದರಿಂದ ಅಂತವರು ಜೀವನದಲ್ಲಿ ಕಂಡ ಕನಸು ಈಡೇರುತ್ತದೆ. ಆರ್ಥಿಕ ಜೀವನ ಉನ್ನತ ಮಟ್ಟಕ್ಕೇರುತ್ತದೆ.

ಹಾಗೇ ಮಕ್ಕಳ ಭವಿಷ್ಯದಲ್ಲಿ ಕಷ್ಟಗಳು ಬರಬಾರದಂತಿದ್ದರೆ ತಾಂಬೂಲದ ಜೊತೆಗೆ ಕೊಬ್ಬರಿಯನ್ನು ವಿಷ್ಣು ದೇವಾಯಲಕ್ಕೆ ದಾನವಾಗಿ ನೀಡಬೇಕು. ಇದರಿಂದ ಮಕ್ಕಳಿಗಿರುವ ಅಪಮೃತ್ಯುದೋಷ ನಿವಾರಣೆಯಾಗಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ ಎಂದು ಪಂಡಿತರು ಹೇಳುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...