alex Certify ಸರ್ಜಾ ಕುಟುಂಬಕ್ಕೆ ಕರಾಳ ಜೂನ್ ತಿಂಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಜಾ ಕುಟುಂಬಕ್ಕೆ ಕರಾಳ ಜೂನ್ ತಿಂಗಳು…!

ನಟ ಚಿರಂಜೀವಿ ಸರ್ಜಾ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಧೃವ ಫಾರ್ಮ್‌ ಹೌಸ್‌ನಲ್ಲಿ ನಡೆಯಲಿದೆ. ನಿನ್ನೆ ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಎಷ್ಟೋ ಮಂದಿ ಈ ಸುದ್ದಿ ಸುಳ್ಳಾಗಲಿ ಅಂದುಕೊಂಡರು. ಬಾಳಿ ಬದುಕಬೇಕಾದ ಜೀವ ಹೀಗೆ ಅಕಾಲಿಕ ಮರಣ ಹೊಂದಿದರೆ ಹೇಗೆ..? ಅಯ್ಯೋ ವಿಧಿಯೆ ನೀನೆಷ್ಟು ಕ್ರೂರಿ..! ಇಂತ ಕಷ್ಟ ಯಾರಿಗೂ ಕೊಡಬೇಡ ದೇವರೇ ಅಂದುಕೊಂಡವರು ಅದೆಷ್ಟೋ ಮಂದಿ.

ಇನ್ನು ಸರ್ಜಾ ಕುಟುಂಬಕ್ಕೆ ಜೂನ್ ಕರಾಳ ತಿಂಗಳು ಅಂದರೆ ತಪ್ಪಾಗಲ್ಲ ಅನ್ನಿಸುತ್ತೆ. ಏಕೆಂದರೆ ಅರ್ಜುನ್ ಸರ್ಜಾ ಅವರ ಸಹೋದರ ಸಹ ಹೃದಯಾಘಾತದಿಂದ ನಿಧನರಾಗಿದ್ದರು. ಕೇವಲ 50ನೇ ವಯಸ್ಸಿನಲ್ಲಿಯೆ ಕಿಶೋರ್ ಸರ್ಜಾ ಇಹಲೋಕ ತ್ಯಜಿಸಿದ್ದರು. 2009 ರ ಜೂನ್ 27 ರಂದು ಕಿಶೋರ್ ಸರ್ಜಾ ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಚಿರಂಜೀವಿ ಸರ್ಜಾ ಸಾವು ಮತ್ತಷ್ಟು ಆಘಾತವುಂಟು ಮಾಡಿದೆ. ನಿರ್ದೇಶಕರಾಗಿದ್ದ ಕಿಶೋರ್ ಸರ್ಜಾ ʼಅಳಿಮಯ್ಯʼ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಾವ ಬಾಮೈದಾ, ತುತ್ತಾಮುತ್ತಾ, ಜೋಡಿ, ವಾಯುಪುತ್ರ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ಈ ಘಟನೆಯಿಂದ ಕೊಂಚ ಸುಧಾರಿಸುತ್ತಲೇ ಇದೀಗ ಮತ್ತೊಂದು ಆಘಾತ ಸರ್ಜಾ ಕುಟುಂಬದಲ್ಲಿ ಆಗಿದ್ದು ನಿಜಕ್ಕೂ ನೋವಿನ ಸಂಗತಿ. ಅನೇಕ ಸಿನಿಮಾಗಳ ಮೂಲಕ, ಸರಳ ವ್ಯಕ್ತಿತ್ವದಿಂದಲೇ ಗುರುತಿಸಿಕೊಂಡಿದ್ದ ಚಿರು ಇಂದು ನಮ್ಮೊಂದಿಗಿಲ್ಲ ಎಂಬುದನ್ನು ಯಾರೂ ಅರಗಿಸಿಕೊಳ್ಳಲಾಗುತ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...