alex Certify ರಾಜ್ಯದಲ್ಲೇ ಕ್ಯಾಸಿನೋ ಆರಂಭಿಸಿದರೆ ನಮ್ಮ ದುಡ್ದು ನಮ್ಮಲ್ಲೇ ಇರುತ್ತೆ ಎಂದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲೇ ಕ್ಯಾಸಿನೋ ಆರಂಭಿಸಿದರೆ ನಮ್ಮ ದುಡ್ದು ನಮ್ಮಲ್ಲೇ ಇರುತ್ತೆ ಎಂದ ಶಾಸಕ

ಮಂಡ್ಯ: ರಾಜ್ಯದಲ್ಲೇ ಕ್ಯಾಸಿನೋ ಓಪನ್ ಮಾಡಬೇಕು. ಇದರಿಂದ ನಮ್ಮ ಹಣ ನಮ್ಮಲ್ಲೇ ಇರುತ್ತದೆ ಎಂದು ಜೆಡಿಎಸ್ ಶಾಸಕ ಸುರೇಶ್ ಗೌಡ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣವೊಂದಿದ್ದರೆ ಕ್ಯಾಸಿನೋದಲ್ಲಿ ಎಲ್ಲ ಸಿಗುತ್ತದೆ. ಕರ್ನಾಟಕದಲ್ಲಿ ದುಡ್ಡು ಮಾಡಿದ್ದನ್ನೆಲ್ಲ ಶ್ರೀಲಂಕಾಗೆ ಹೋಗಿ ಕಳೆಯುತ್ತಿದ್ದಾರೆ. ಕರ್ನಾಟಕದಲ್ಲೇ ಕ್ಯಾಸಿನೋ ಓಪನ್ ಮಾಡಿದರೆ ನಮ್ಮ ದುಡ್ಡು ನಮ್ಮಲ್ಲೇ ಉಳಿಯುತ್ತದೆ ಎಂದರು.

ಕ್ಯಾಸಿನೋಗೆ ಜಮೀರ್ ಒಬ್ಬರೇ ಹೋಗಿಲ್ಲ. ಒಂದು ಟೀಂ ಹೋಗಿರುತ್ತೆ. ಎಲ್ಲರ ಪಾಸ್ ಪೋರ್ಟ್ ತೆಗೆದುಕೊಂಡರೆ ಎಲ್ಲರ ಬಗ್ಗೆಯೂ ಮಾಹಿತಿ ಲಭ್ಯವಾಗುತ್ತೆ. ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನಮಗೆ ಗೊತ್ತಿಲ್ಲ. ನಾವು ಜಮೀರ್ ಅವರನ್ನು ಟಾರ್ಗೆಟ್ ಮಾಡುತ್ತಲೂ ಇಲ್ಲ. ಇದೆಲ್ಲದರ ಬಗ್ಗೆ ತನಿಖೆಯಾಗಬೇಕು. ಸರ್ಕಾರ ತನ್ನ ತಪ್ಪು ಮುಚ್ಚಿಡಲು ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣ ಆರಂಭಿಸಿತು. ಇದೀಗ ಡ್ರಗ್ ಮಾಫಿಯಾ ವಿಚಾರ ಆರಂಭಿಸಿದೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು. ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಕಿಡಿಕಾರಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...