alex Certify ಯಾರು ರಾಜಾಹುಲಿ ಆಗ್ತಾರೆ, ಯಾರು ಬೆಟ್ಟದ ಹುಲಿ ಆಗ್ತಾರೆ ಎಂದು ಜನ ತೀರ್ಮಾನ ಮಾಡ್ತಾರೆ; ವಿಜಯೇಂದ್ರ ವಿರುದ್ಧ ಯತ್ನಾಳ್ ಗುಡುಗು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾರು ರಾಜಾಹುಲಿ ಆಗ್ತಾರೆ, ಯಾರು ಬೆಟ್ಟದ ಹುಲಿ ಆಗ್ತಾರೆ ಎಂದು ಜನ ತೀರ್ಮಾನ ಮಾಡ್ತಾರೆ; ವಿಜಯೇಂದ್ರ ವಿರುದ್ಧ ಯತ್ನಾಳ್ ಗುಡುಗು

ತುಮಕೂರು: ಸಿಎಂ ಬಿಎಸ್ ವೈ ಪುತ್ರ ವಿಜಯೇಂದ್ರ ಭವಿಷ್ಯದ ರಾಜಾಹುಲಿ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾರು ರಾಜಾಹುಲಿ, ಯಾರು ಬೆಟ್ಟದ ಹುಲಿ ಎಂದು ರಾಜ್ಯದ ಜನತೆ ಮುಂದೆ ನಿರ್ಧರಿಸುತ್ತಾರೆ ಎಂದಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಯತ್ನಾಳ್, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಯಾರು ರಾಜಾಹುಲಿ ಆಗ್ತಾರೆ, ಯಾರು ಬೆಟ್ಟದ ಹುಲಿ ಆಗ್ತಾರೆ ಎಂಬುದನ್ನು ಭವಿಷ್ಯದಲ್ಲಿ ಜನರೇ ತೀರ್ಮಾನ ಮಾಡ್ತಾರೆ. ಹಣವಿದ್ದರೆ ಎಲ್ಲವೂ ಸಾಧ್ಯ ಎಂಬುದು ಸುಳ್ಳು. ಹಣದಿಂದ ಏನುಬೇಕಾದರೂ ಮಾಡಲು ಸಾಧ್ಯ ಎನ್ನುವುದಾದರೆ ಟಾಟಾ ಬಿರ್ಲಾ ಅವರೇ ಪ್ರಧಾನಿ ಆಗುತ್ತಿದ್ದರು. ಯಾಕೆ ಡಿ.ಕೆ.ಶಿವಕುಮಾರ್ ಬಳಿ ಇಂದು ಹಣವಿಲ್ಲವೇ? ದೇಶದಲ್ಲಿ ಹಣವಿದ್ದವರು ಎಷ್ಟೊಂದು ಜನರಿದ್ದಾರೆ ಹೀಗಿರುವಾಗ ಹಣದಿಂದಲೇ ಎಲ್ಲ ಸಾಧ್ಯ ಎಂಬುದು ಕೇವಲ ಭ್ರಮೆ ಎಂದರು.

ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಕಿಡಿಕಾರಿದ ಯತ್ನಾಳ್: ರಾಜಕೀಯ ಅಸ್ತ್ರವಾಗಿ ಸಮುದಾಯಗಳ ಬಳಕೆ ಎಂದು ಕಿಡಿ

ರಾಜ್ಯದಲ್ಲಿ ನಿನ್ನೆ 42 ಅಧಿಕಾರಿಗಳ ವರ್ಗಾವಣೆಯಾಗಿದೆ. ಹೋಲ್ ಸೇಲ್ ವ್ಯಾಪಾರದಂತೆ ಅಧಿಕಾರಿಗಳ ವರ್ಗಾವಣೆ ಮಾಡಿದ್ದಾರೆ. ಇಲ್ಲಿಯೂ ಹಣದ ಆಟ ನಡೆದಿದೆ. ಇನ್ನು ಪಂಚಮಸಾಲಿ ಸಮುದಾಯ ಒಡೆಯುವ ಯತ್ನ ಮಾಡಲಾಗುತ್ತಿದೆ. ಸಿಎಂ ಪುತ್ರ ವಿಜಯೇಂದ್ರ, ಸಚಿವ ನಿರಾಣಿ ಇಂತಹ ಯತ್ನ ನಡೆಸುತ್ತಿದ್ದಾರೆ. ವಿಜಯೇಂದ್ರ 8 ದಿನ ದೆಹಲಿಯಲ್ಲಿ ಯಾಕಿದ್ದರು? ಯಾವ ತನಿಖಾ ಸಂಸ್ಥೆ ಇವರನ್ನು ವಿಚಾರಣೆ ನಡೆಸುತ್ತಿದೆ. ದೆಹಲಿ ಎಲ್ಲಾ ವಿಚಾರ ನನಗೆ ಗೊತ್ತು ಎಂದು ವಾಗ್ದಾಳಿ ನಡೆಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...