ವಿಪರೀತ ಮೊಬೈಲ್ ಗೀಳು ಹೊಂದಿದ್ದ ಬಾಲಕನೊಬ್ಬ ಪಾಲಕರು ಇದನ್ನು ತ್ಯಜಿಸುವಂತೆ ಬುದ್ಧಿ ಮಾತು ಹೇಳಿದರೆಂಬ ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾಗಿದ್ದಾನೆ.
ಬಸವಕಲ್ಯಾಣದ ರಾಜೇಶ್ವರ ಗ್ರಾಮದ ರಾಹುಲ್ ವಿಶ್ವನಾಥ ಎಂಬ 17 ವರ್ಷದ ಬಾಲಕ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ.
ಪಾಲಕರು ಇದನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರಾದರೂ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ.