alex Certify ಬಸ್ ಇಂಜಿನ್ ಸೇರಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಇಂಜಿನ್ ಸೇರಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು

ಬಸ್ ನಿಂತಿದ್ದ ವೇಳೆ ಅದರ ಇಂಜಿನ್ ನಲ್ಲಿ ನಾಗರಹಾವೊಂದು ಸೇರಿಕೊಂಡು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಯಲ್ಲಿ ನಡೆದಿದೆ.

ಶಿವಮೊಗ್ಗದಿಂದ ಕುಂದಾಪುರಕ್ಕೆ ಹೊರಟಿದ್ದ ಖಾಸಗಿ ಬಸ್ ಸಂಜೆ 4.30 ರ ಸುಮಾರಿಗೆ ರಿಪ್ಪನ್ ಪೇಟೆಗೆ ತಲುಪಿದ್ದು, ವಿನಾಯಕ ವೃತ್ತದಲ್ಲಿ ಬಸ್ ನಿಂತ ವೇಳೆ ಪ್ರಯಾಣಿಕರು ಇಳಿಯಲು ಅನುವಾಗಿದ್ದಾರೆ.

ಈ ವೇಳೆ ನೋಡನೋಡುತ್ತಿದ್ದಂತೆ ನಾಗರಹಾವೊಂದು ಬಸ್ ಅಡಿಯಿಂದ ಇಂಜಿನ್ ಸೇರಿಕೊಂಡಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಕೆಳಗಿಳಿದಿದ್ದು, ಎಷ್ಟೇ ಹುಡುಕಿದರು ಹಾವು ಕಣ್ಣಿಗೆ ಬಿದ್ದಿಲ್ಲ. ಬಳಿಕ ಧೈರ್ಯ ವಹಿಸಿ ಬಸ್ ಪ್ರಯಾಣ ಮುಂದುವರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...