alex Certify ಗೊತ್ತಿರದ ವಿಚಾರದ ಬಗ್ಗೆ ಮಾತನಾಡುವುದು ತಪ್ಪು ಎಂದ ಕಿಚ್ಚ ಸುದೀಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊತ್ತಿರದ ವಿಚಾರದ ಬಗ್ಗೆ ಮಾತನಾಡುವುದು ತಪ್ಪು ಎಂದ ಕಿಚ್ಚ ಸುದೀಪ್

ತುಮಕೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಈ ವಿಚಾರದ ಬಗ್ಗೆ ಏನೂ ಗೊತ್ತಿಲ್ಲ. ನನಗೆ ಗೊತ್ತಿರದ ವಿಚಾರದ ಬಗ್ಗೆ ಮಾತನಾಡುವುದು ತಪ್ಪಾಗುತ್ತದೆ ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ರೈಸ್, ದಾಲ್ ಬಗ್ಗೆ ಗೊತ್ತು. ಡ್ರಗ್ಸ್ ಬಗ್ಗೆ ಗೊತ್ತಿಲ್ಲ. ಹಲವರಿಂದ ಕನ್ನಡ ಚಿತ್ರರಂಗ ಕಟ್ಟಲ್ಪಟ್ಟಿದೆ. ಯಾವುದೋ ಒಂದು ವಿಚಾರಕ್ಕೆ ಚಿತ್ರರಂಗವನ್ನು ದೂಷಿಸುವುದು ಬೇಡ. ಒಂದು ಸಣ್ಣ ವಿಚಾರದಿಂದ ಇಡೀ ಚಿತ್ರರಂಗಕ್ಕೆ ಕಳಂಕ ತರುವುದು ತಪ್ಪಾಗುತ್ತದೆ ಎಂದರು.

ಪಾರ್ಟಿ ಎನ್ನುವುದು ಅವರವರ ವಿಚಾರಕ್ಕೆ ಬಿಟ್ಟದ್ದು. ನಾಲ್ಕು ಜನರು ಕೂತು ಸಂತಸದಿಂದ ಮಾತನಾಡುವುದೂ ಪಾರ್ಟಿಯೇ. ಇಬ್ಬರು ಕೂತು ಖುಷಿಯಿಂದ ಮಾತನಾಡಿದರೆ ಅದೂ ಕೂಡ ನನ್ನ ಪ್ರಕಾರ ಪಾರ್ಟಿಯೇ. ಪಾರ್ಟಿಯನ್ನು ಯಾವ ಅರ್ಥದಲ್ಲಿ ನೀವೆಲ್ಲ ಕಲ್ಪಿಸುತ್ತಿದ್ದೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದರು.

ಇನ್ನು ನಿಧನರಾಗಿರುವ ನಟ ಚಿರಂಜೀವಿ ಸರ್ಜಾ ಬಗ್ಗೆ ಆರೋಪ ಮಾಡುವುದು ತಪ್ಪು. ಅವರು ನನ್ನ ಸಹೋದರನಿದ್ದಂತೆ. ನಾನು ಅವರನ್ನು ಸಹೋದರ ಎಂತಲೇ ನೋಡುತ್ತಿದ್ದೆ. ಅವರ ನಿಧನ ತುಂಬಾ ನೋವು ತಂದಿದೆ. ನಿಧನರಾಗಿರುವ ವ್ಯಕ್ತಿಯ ಹೆಸರನ್ನು ಇಂತಹ ವಿಚಾರಕ್ಕೆ ಎಳೆದು ತರುವುದು ತಪ್ಪು. ಸಾವನ್ನಪ್ಪಿರುವ ವ್ಯಕ್ತಿಯ ಬಗ್ಗೆ ಈಗ ಕೆದಕಿ ತರುವುದರಿಂದ ಏನು ಪ್ರಯೋಜನ? ನಿಧನರಾದ ವ್ಯಕ್ತಿ ರೆಸ್ಟ್ ಇನ್ ಪೀಸ್ ಎಂದು ಹೇಳಿದ ಮೇಲೆ ಮತ್ತೆ ಅವರ ಬಗ್ಗೆ ಆರೋಪ ಮಾಡುತ್ತಾ ಕೆದಕುವುದು ಸರಿಯಲ್ಲ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...