ಸರ್ಕಾರದ ನೀತಿಗಳು ಕೊರೊನಾ ಹೆಚ್ಚಾಗಲು ಕಾರಣವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಲಾಕ್ ಡೌನ್ ಸಡಿಲಿಕೆ ಇದಕ್ಕೆ ಕಾರಣ. ಜನರು ಇದ್ರ ಬಗ್ಗೆ ಜಾಗೃತರಾಗಿಲ್ಲ. ವಿದ್ಯಾವಂತರು ಕೂಡ ಮಾಸ್ಕ್ ಹಾಕಿಕೊಳ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೊರೊನಾಗೆ ಲಸಿಕೆಯಿಲ್ಲ. ಸಾಮಾಜಿಕ ಅಂತರ ಇದಕ್ಕೆ ಮದ್ದು ಎಂದು ಅವರು ತಿಳಿಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಲಾಕ್ ಡೌನ್ ಸಡಿಲಿಕೆ ನಂತ್ರ ಪ್ರಕರಣ ಹೆಚ್ಚಾಗಿ ಕಂಡು ಬರ್ತಿದೆ. ಲಾಕ್ ಡೌನ್ ಸಡಿಲಿಕೆ ನಂತ್ರ ಜನರ ಓಡಾಟ ಎಂದಿನಂತೆ ಕಂಡು ಬರ್ತಿದ್ದು, ಇದು ರಾಜ್ಯಕ್ಕೆ ಮತ್ತಷ್ಟು ಆತಂಕ ತರುವ ಸಾಧ್ಯತೆಯಿದೆ.
ಇಂದು ರಾಜ್ಯದಲ್ಲಿ 36 ಹೊಸ ಪ್ರಕರಣ ಬೆಳಕಿಗೆ ಬಂದಿದೆ. ಹೀಗೆ ಮುಂದುವರೆದ್ರೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.