alex Certify ಕಾವ್ಯಾತ್ಮ ಆತ್ಮ ರವಿ ಅವರದ್ದು, ಇದು ಅವರ ಸಾವಲ್ಲ….ಎಂದ ಯೋಗರಾಜ್ ಭಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾವ್ಯಾತ್ಮ ಆತ್ಮ ರವಿ ಅವರದ್ದು, ಇದು ಅವರ ಸಾವಲ್ಲ….ಎಂದ ಯೋಗರಾಜ್ ಭಟ್

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನ ಹಿನ್ನೆಲೆಯಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿರುವ ಚಿತ್ರ ಸಾಹಿತಿ ಯೋಗರಾಜ್ ಭಟ್, ಮೊನ್ನೆಯಷ್ಟೇ ದೂರವಾಣಿಯಲ್ಲಿ ಮಾತನಾಡಿದ್ದೆ. ಈಗ ಅವರಿಲ್ಲ ಎಂಬುದು ಊಹಿಸಿಕೊಳ್ಳಲು ಆಗುತ್ತಿಲ್ಲ. ಸಾವು ಬಂದು ಕರೆದಾಗ ನಡಿ ಅತ್ಲಾಗೆ ಅಂತಾ ಹೊರಟು ಬಿಟ್ರೇನೋ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ರವಿ ಬೆಳಗೆರೆ ಅಂತಿಮ ದರ್ಶನ ಪಡೆದು ಮಾತನಾಡಿದ ಯೋಗರಾಜ್ ಭಟ್, ಮೊನ್ನೆಯಷ್ಟೇ ನನ್ನ ಸಿನಿಮಾ ಹಾಗೂ ಹಾಡಿನ ಬಗ್ಗೆ ಅವರೊಂದಿಗೆ ಚರ್ಚಿಸಿದ್ದೆ. ಕಾವ್ಯಾತ್ಮ ಆತ್ಮ ಅವರದ್ದು. ಸಂಗೀತವನ್ನು ತುಂಬಾ ಪ್ರೀತಿಸಿದ ಜೀವ ಅವರದ್ದು. ಓರ್ವ ಅಭಿಮಾನಿಯಾಗಿ ಹೇಳಬೇಕೆಂದರೆ ಇದು ಅವರ ಸಾವಲ್ಲ, ಹುಟ್ಟು ಎಂದು ಭಾವುಕರಾದರು.

ಧೈರ್ಯಕ್ಕೆ ಇನ್ನೊಂದು ಹೆಸರೆ ರವಿ ಬೆಳಗೆರೆ. ಅವರೊಬ್ಬ ಮಾದರಿ ಪತ್ರಕರ್ತ. ಮುಂದೆ ಅವರ ಬರಹಗಳ ಜೊತೆ ನಾವು ಕಾಲಕಳೆಯಬೇಕಷ್ಟೇ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...