alex Certify ಎಟಿಎಂ ದರೋಡೆಗೆ ಯತ್ನ: ಸೈರನ್ ಸೌಂಡು ಕೇಳಿ ದಿಕ್ಕಾಪಾಲಾಗಿ ಓಡಿದ ಕಳ್ಳರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಟಿಎಂ ದರೋಡೆಗೆ ಯತ್ನ: ಸೈರನ್ ಸೌಂಡು ಕೇಳಿ ದಿಕ್ಕಾಪಾಲಾಗಿ ಓಡಿದ ಕಳ್ಳರು

ಮಂಡ್ಯ: ಎಟಿಎಂ ನಲ್ಲಿ ದರೋಡೆಗೆ ಯತ್ನಿಸಿದ ವೇಳೆ ಕೊಠಡಿಯಲ್ಲಿದ್ದ ಸೈರನ್ ಮೊಳಗಿದ ಪರಿಣಾಮ ಕಂಗಾಲಾದ ಕಳ್ಳರು ಓಡಿ ಹೋದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಇಲ್ಲಿನ ಎಕ್ಸಿಸ್ ಬ್ಯಾಂಕ್ ಎಟಿಎಂ ನಲ್ಲಿ ದರೋಡೆಗೆಂದು ದುಷ್ಕರ್ಮಿಗಳು ಬಂದಿದ್ದಾರೆ. ಸೆಕ್ಯೂರಿಟಿ ಇಲ್ಲದ್ದನ್ನು ಗಮನಿಸಿ ನೇರವಾಗಿ ಎಟಿಎಂಗೆ ನುಗ್ಗಿ ಎಟಿಎಂ ಯಂತ್ರ ಕೊರೆಯಲು ಆರಂಭಸಿದ್ದಾರೆ. ಈ ವೇಳೆ ಕೊಠಡಿಯಲ್ಲಿದ್ದ ಸೈರನ್ ಮೊಳಗಲು ಆರಂಭವಾಗಿದೆ.

ಗಾಭರಿಗೊಂಡ ಕಳ್ಳರು ಸ್ಥಳದಿಂದ ಎದ್ದು ಬಿದ್ದು ಪರಾರಿಯಾಗಿದ್ದಾರೆ. ಶ್ರೀರಂಗ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...