alex Certify ಅಂತಿಮ ವಿಧಿ ವಿಧಾನದ ಪ್ರಕ್ರಿಯೆ ನಡೆಯುತ್ತಿದ್ದಂತೆ ಕಣ್ಣೀರಿಟ್ಟ ಮೇಘನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂತಿಮ ವಿಧಿ ವಿಧಾನದ ಪ್ರಕ್ರಿಯೆ ನಡೆಯುತ್ತಿದ್ದಂತೆ ಕಣ್ಣೀರಿಟ್ಟ ಮೇಘನಾ

ನಟ ಚಿರಂಜೀವಿ ಸರ್ಜಾ ಬಾಳಿ ಬದುಕಬೇಕಾದ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಮೇಘನಾರನ್ನು ಪ್ರೀತಿಸಿ ಮದುವೆಯಾಗಿದ್ದ ಚಿರು ಇಂದು ಮೇಘನಾರನ್ನು ಒಬ್ಬಂಟಿ ಮಾಡಿದ್ದಾರೆ. ಈ ಪರಿಸ್ಥಿತಿ ನಿಜಕ್ಕೂ ಯಾರಿಗೂ ಬರುವುದು ಬೇಡ ಅಂತಿದ್ದಾರೆ ಇಡೀ ನಾಡಿನ ಜನತೆ.

ತಮ್ಮ ಕಣ್ಣ ಮುಂದೆ ಸುಖವಾಗಿ ಇರಬೇಕಿದ್ದ ಮಗ ಇಂದು ಕಣ್ಮುಚ್ಚಿರುವುದು ಒಂದು ಕಡೆಯಾದ್ರೆ, ಮತ್ತೊಂದು ಕಡೆ ತಾವೇ ತಮ್ಮ ಕೈಯಾರೆ ಮಗನ ಅಂತಿಮ ವಿಧಿ ವಿಧಾನ ನೆರವೇರಿಸಬೇಕು ಅಂದರೆ ಹೇಗಿರುತ್ತದೆ. ಇಂದು ಅದೇ ಪರಿಸ್ಥಿತಿ ಚಿರು ತಂದೆಗೆ ಬಂದೊದಗಿದೆ. ಚಿರುವಿನ ಅಂತಿಮ ವಿಧಿ ವಿಧಾನವನ್ನು ತಮ್ಮ ನಿವಾಸದ ಎದುರು ಒಕ್ಕಲಿಗ ಸಮುದಾಯದ ಪ್ರಕಾರ ಮಾಡಲಾಗುತ್ತಿದೆ. ಆದರೆ ಈ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆಯೇ ಅಲ್ಲಿ ನೆರೆದಿದ್ದವರಲ್ಲಿ ಶೋಕ ಮಡುಗಟ್ಟಿದೆ.

ಇತ್ತ ಮೇಘನಾ ರಾಜ್ ಕೂಡ ಪತಿಯ ಮುಖ ನೋಡುತ್ತಿದ್ದಂತೆಯೇ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.ಮನೆ ಮಂದಿಯೆಲ್ಲಾ ಪೂಜಾ ವಿಧಿ ವಿಧಾನ ಪ್ರಾರಂಭವಾಗುತ್ತಿದ್ದಂತೆಯೇ ಕಣ್ಣೀರು ಇಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...