alex Certify 21 ಎಕರೆ ಬಂಜರು ಭೂಮಿಯಲ್ಲಿ ದಟ್ಟಡವಿ ಸೃಷ್ಟಿಸಿದ ಉದ್ಯಮಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

21 ಎಕರೆ ಬಂಜರು ಭೂಮಿಯಲ್ಲಿ ದಟ್ಟಡವಿ ಸೃಷ್ಟಿಸಿದ ಉದ್ಯಮಿ

Karnataka Bizman Converts 21 Acres of Barren Land Into Dense Forest in 10 Years

ಸಾಗರದ ಬಳಿ 21 ಎಕರೆಯಷ್ಟು ಜಮೀನನ್ನು ಖರೀದಿ ಮಾಡಿರುವ ಬೆಂಗಳೂರು ಮೂಲದ ಉದ್ಯಮಿ ಸುರೇಶ್ ಕುಮಾರ್‌, ಕಳೆದ ಹತ್ತು ವರ್ಷಗಳಲ್ಲಿ ಈ ಜಾಗದಲ್ಲಿ ಅರಣ್ಯದ ಕವಚ ಮೂಡುವಂತೆ ಮಾಡಿ ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ.

ಪರಿಸರವಾದಿ ಅಖಿಲೇಶ್ ಚಿಪ್ಲಿ ಜೊತೆಗೂಡಿದ ಸುರೇಶ್ ಕುಮಾರ್‌ ತಮ್ಮ ಜಮೀನಿಗೆ ’ಉಷಾ ಕಿರಣ’ ಎಂದು ಹೆಸರಿಟ್ಟಿದ್ದಾರೆ. ಸೂರ್ಯನ ಕಿರಣಗಳೆಂಬ ಅರ್ಥ ಕೊಡುವ ಹೆಸರನ್ನು ಹೊಂದಿರುವ ಈ ಜಮೀನಿನಲ್ಲಿ ಆಯ್ದ ತಳಿಯ ವಿಶಿಷ್ಟ ಸಸ್ಯಗಳು ಇದ್ದು, ಇವುಗಳಲ್ಲಿ ಬಹುತೇಕ ಸ್ವಾಭಾವಿಕವಾಗಿ ಬೆಳೆಯುತ್ತಿವೆ.

ನಾಪತ್ತೆಯಾಗಿದ್ದ ಶ್ವಾನ ಮರಳಿ ಬಂದ ರೀತಿ ಕಂಡು ದಂಪತಿಗೆ ಅಚ್ಚರಿ

ಈ ಜಾಗವೀಗ ಪಶ್ಚಿಮ ಘಟ್ಟಗಳಲ್ಲಿ ಸಿಗುವ ವಿಶಿಷ್ಟ ತಳಿಯ ಸಸಿಗಳಿಂದ ತುಂಬಿದ್ದು ಪರಿಸರ ತಜ್ಞರು ಹಾಗೂ ವಿದ್ಯಾರ್ಥಿಗಳಿಗೆ ಅಧ್ಯಯನ ಕೇಂದ್ರವಾಗಿದೆ. ಪಶ್ಚಿಮ ಘಟ್ಟಗಳ ಸಸ್ಯವರ್ಗ ಹಾಗೂ ಪ್ರಾಣಿ ಸಂಕುಲದ ರಕ್ಷಣೆಗೆ ತಮ್ಮ ಕೈಲಾದ ಸೇವೆ ಮಾಡುವ ಉದ್ದೇಶದಿಂದ ಹೀಗೆ ಮಾಡಿರುವುದಾಗಿ ಸುರೇಶ್ ತಿಳಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...