alex Certify ಹಿಂದೂ ಹೆಸರು ಹೇಳಿಕೊಂಡು ಬಾಲಕಿಯನ್ನು ಮದುವೆಯಾಗ ಹೊರಟವನಿಗೆ ಗೂಸಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದೂ ಹೆಸರು ಹೇಳಿಕೊಂಡು ಬಾಲಕಿಯನ್ನು ಮದುವೆಯಾಗ ಹೊರಟವನಿಗೆ ಗೂಸಾ

ರಾಂಚಿ: ಜಾರ್ಖಂಡ್‌ನ ಬೊಕಾರೊದಲ್ಲಿ ಅಸ್ಲಾಂ ಖಾನ್ ಎಂಬ ಖದೀಮನೊಬ್ಬ ಹಿಂದೂ ಎಂದು ಹೇಳಿಕೊಂಡು ಬಡ ಕುಟುಂಬದ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಲು ಮುಂದಾಗಿ ವಂಚಿಸಿದ ಘಟನೆ ನಡೆದಿದೆ.

ಮದುವೆಯ ದಿನ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಜನರು ಆತನನ್ನು ಥಳಿಸಿದ್ದಾರೆ. ಆದರೆ ಪೊಲೀಸರಿಗೆ ಒಪ್ಪಿಸುವ ಮೊದಲು ಆತನ ಕಾರಿನಲ್ಲಿ ಪರಾರಿಯಾಗಿದ್ದಾನೆ.

ಬೊಕಾರೊದ ಸೆಕ್ಟರ್ -9 ರ ಹರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕುಮ್ಹಾರ್ತೋಲಿಯಲ್ಲಿ ಈ ಘಟನೆ ನಡೆದಿದೆ.

ಆರೋಪಿಯು ಸುಮಾರು 50 ವರ್ಷ ವಯಸ್ಸಿನವನಾಗಿದ್ದು, ಧನಬಾದ್‌ನ ವಸ್ಸೇಪುರ್ ನಿವಾಸಿ ಎಂದು ಹೇಳಲಾಗಿದೆ.

ಬಾಲಕಿಯ ತಂದೆ ರಾಜು ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಸಾಲಕ್ಕಾಗಿ ರಾಜು ಅವರು ಬ್ಯಾಂಕ್‌ಗೆ ಭೇಟಿ ನೀಡಿದಾಗ ಆರೋಪಿಯನ್ನು ಭೇಟಿಯಾದರು. ತನ್ನನ್ನು ಸಂಜಯ್ ಕಸೇರಾ ಎಂದು ಪರಿಚಯಿಸಿಕೊಂಡ ಈತ ಸಾಲಕ್ಕೆ ಸಹಾಯ ಮಾಡುವ ನೆಪದಲ್ಲಿ ಅವರ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದ.

ತಾನು ಪೊಲೀಸ್‌ ಅಧಿಕಾರಿ ಎಂದು ಹೇಳಿಕೊಂಡ ಆತ, ರಾಜು ಅವರ ಮಗಳಿಗೆ ಉತ್ತಮ ಭವಿಷ್ಯವನ್ನು ನೀಡುವುದಾಗಿ ಹೇಳಿ ಮದುವೆಗೆ ಒತ್ತಡ ಹೇರಿದ್ದ. ಮದುವೆಗೆ ಎಲ್ಲಾ ತಯಾರಿ ನಡೆದಿತ್ತು.

ಪೆಂಡಾಲ್‌ ಹಾಕಲು ಬಂದಾಗ ಈತನ ಅಸಲಿ ಮುಖ ಬಯಲಾಗಿದೆ. ಈತನ ವಿರುದ್ಧ ಲವ್‌ ಜಿಹಾದ್ ಕೇಸ್‌ ದಾಖಲಿಸಬೇಕು ಎಂದು ಒತ್ತಾಯ ಕೇಳಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...