alex Certify ಜೆಸಿಬಿಯಿಂದ ರಸ್ತೆಗಳನ್ನು ಅಗೆದು ಸಂಪರ್ಕ ಬಂದ್: ಅನಗತ್ಯ ಸಂಚಾರಕ್ಕೆ ಬ್ರೇಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೆಸಿಬಿಯಿಂದ ರಸ್ತೆಗಳನ್ನು ಅಗೆದು ಸಂಪರ್ಕ ಬಂದ್: ಅನಗತ್ಯ ಸಂಚಾರಕ್ಕೆ ಬ್ರೇಕ್

ಚಿತ್ರದುರ್ಗ: ಆಂಧ್ರಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಿಂದ ಆಂಧ್ರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಾಂಪುರ, ಹೊಸೂರು, ಕಣಕುಪ್ಪೆ, ಪೆಮ್ಮನಹಳ್ಳಿ, ಉಚ್ಚಂಗಿದುರ್ಗ ಗ್ರಾಮದ ರಸ್ತೆಗಳನ್ನು ಅಗೆದು ಬಂದ್ ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವ್ಯಾಪ್ತಿಯ ರಾಂಪುರ ಠಾಣೆ ಪೊಲೀಸರು ಲಾಕ್ ಡೌನ್ ಜಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಂತರರಾಜ್ಯ ಸಂಚಾರ ಬಂದ್ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗೆದು ಸಂಚಾರಕ್ಕೆ ತಡೆ ನೀಡಲಾಗಿದೆ.

ಜೆಸಿಬಿ ಸಹಾಯದಿಂದ ರಸ್ತೆಗಳಲ್ಲಿ ಅಗೆಯಲಾಗಿದ್ದು ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಆಂಧ್ರಪ್ರದೇಶದಿಂದ ನೂರಾರು ಮಂದಿ ರಾಂಪುರಕ್ಕೆ ಅನಗತ್ಯವಾಗಿ ಓಡಾಡುತ್ತಾರೆ. ಈ ಹಿನ್ನೆಲೆಯಲ್ಲಿ ರಾಂಪುರ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...