alex Certify ಆರೋಗ್ಯದ ಜೊತೆ ‘ಅದೃಷ್ಟ’ ಬದಲಾಯಿಸುತ್ತೆ ನೀವು ಮಾಡುವ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯದ ಜೊತೆ ‘ಅದೃಷ್ಟ’ ಬದಲಾಯಿಸುತ್ತೆ ನೀವು ಮಾಡುವ ಕೆಲಸ

ಸ್ವಲ್ಪ ಹಾಲಿಗೆ ನಿಮ್ಮೆಲ್ಲ ತೊಂದರೆಗಳನ್ನು ಕಡಿಮೆ ಮಾಡುವ ಶಕ್ತಿ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಾಲನ್ನು ಚಂದ್ರನಿಗೆ ಹೋಲಿಸಲಾಗಿದೆ. ಹಾಲು ಸಮಸ್ಯೆಗಳನ್ನು ನಿವಾರಿಸುತ್ತದೆ.

ಆಗಾಗ ಅಪಘಾತಗಳು ಎದುರಾಗ್ತಾ ಇದ್ದರೆ ಶುಕ್ಲ ಪಕ್ಷದ ಅಮವಾಸ್ಯೆ ನಂತ್ರ ಬರುವ ಮೊದಲ ಮಂಗಳವಾರ 400 ಗ್ರಾಂ ಹಾಲಿನಲ್ಲಿ ಅಕ್ಕಿಯನ್ನು ತೊಳೆದು ನದಿಗೆ ಬಿಡಿ. ನಾಲ್ಕು ಮಂಗಳವಾರ ಹೀಗೆ ಮಾಡಬೇಕು. ಇದಾದ ನಂತ್ರ ನಿಮಗೆ ಪರಿಣಾಮ ತಿಳಿಯುತ್ತದೆ.

ಆರ್ಥಿಕ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ರಾತ್ರಿ ಒಂದು ಲೋಟ ಹಾಲನ್ನು ತಲೆ ಬದಿಯಲ್ಲಿಟ್ಟು ಮಲಗಿ. ಬೆಳಿಗ್ಗೆ ಈ ಹಾಲನ್ನು ಗಮ್ ಅರೇಬಿಕ್ ಮರದ ಕೆಳಗೆ ಹಾಕಿ.

ಜಾತಕದಲ್ಲಿ ಗ್ರಹ ದೋಷ ಕಂಡು ಬಂದಲ್ಲಿ 7 ಸೋಮವಾರ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ.

ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಬೇಕೆಂದು ಬಯಸುವವರು ಹಾಲಿಗೆ ಸಕ್ಕರೆ ಹಾಗೂ ತುಪ್ಪವನ್ನು ಸೇರಿಸಿ ಅರಳಿ ಮರಕ್ಕೆ ಅರ್ಪಣೆ ಮಾಡಿ.

ಜಾತಕದಲ್ಲಿ ಗುರು ಗ್ರಹ ದೋಷ ಕಂಡು ಬಂದಲ್ಲಿ ಹಾಲಿಗೆ ಸಕ್ಕರೆ ಹಾಗೂ ಕೇಸರಿಯನ್ನು ಹಾಕಿ ಸಂಜೆ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ರೆ ಗುರು ಬಲ ಲಭಿಸುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...