alex Certify ಭಾರತೀಯ ಪ್ರವಾಸಿಗರ ‘ಕೈಲಾಸ’ ಪ್ರವಾಸಕ್ಕೆ ನಿರ್ಬಂಧ ಹೇರಿದ ಸ್ವಾಮಿ ನಿತ್ಯಾನಂದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಪ್ರವಾಸಿಗರ ‘ಕೈಲಾಸ’ ಪ್ರವಾಸಕ್ಕೆ ನಿರ್ಬಂಧ ಹೇರಿದ ಸ್ವಾಮಿ ನಿತ್ಯಾನಂದ

ದೇಶದಲ್ಲಿ ಕೊರೊನಾ ವೈರಸ್ ಎರಡನೇ ಅಲೆ ತನ್ನ ರಣಕೇಕೆ ಮುಂದುವರಿಸಿದೆ. ಈ ನಡುವೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ, ತನ್ನ ಭಾರತೀಯ ಭಕ್ತರ ಕೈಲಾಸ ಪ್ರವಾಸಕ್ಕೆ ನಿರ್ಬಂಧ ಹೇರಿದ್ದಾನೆ.

ಭಾರತದ ಜೊತೆಯಲ್ಲಿ ಬ್ರೆಜಿಲ್​, ಯುರೋಪ್​ ರಾಷ್ಟ್ರಗಳ ಒಕ್ಕೂಟ ಹಾಗೂ ಮಲೇಷಿಯಾ ಭಕ್ತರಿಗೆ ಕೈಲಾಸ ಪ್ರವಾಸಕ್ಕೆ ನಿರ್ಬಂಧ ಹೇರಲಾಗಿದೆ. ಭಕ್ತರಿಗೆ ನಿತ್ಯಾನಂದ ಸ್ವಾಮಿ ನೀಡಿರುವ ವಿಡಿಯೋ ಸಂದೇಶ ಟ್ವಿಟರ್​ನಲ್ಲಿ ಸಾಕಷ್ಟು ಟ್ರೋಲ್​ಗೆ ಗುರಿಯಾಗಿದೆ.

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ 2019ರಲ್ಲಿ ಭಾರತದಿಂದ ಪಲಾಯನ ಮಾಡಿದ್ದಾನೆ. ಹಾಗೂ ಈಕ್ವೆಡಾರ್​ನ ದ್ವೀಪವೊಂದಕ್ಕೆ ಕೈಲಾಸ ಎಂದು ಹೆಸರಿಟ್ಟು ಅಲ್ಲಿ ತಲೆಮರೆಸಿಕೊಂಡಿದ್ದಾನೆ.

ನಿತ್ಯಾನಂದ ಸ್ವಾಮಿಯ ಪ್ರವಚನದ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಟ್ರೋಲ್​ ಆಗಿದೆ. ಈತ ಈಗಾಗಲೇ ಕೈಲಾಸವನ್ನ ಪ್ರತ್ಯೇಕ ದೇಶವೆಂದು ಗುರುತಿಸಿ ಎಂದು ಮನವಿ ಮಾಡಿ ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾನೆ.

ಕೈಲಾಸಕ್ಕೆ ಪ್ರತ್ಯೇಕ ವೆಬ್​ಸೈಟ್​​ ತೆರೆಯೋದ್ರ ಜೊತೆಗೆ ಆತ ಅಲ್ಲಿ ಪ್ರತ್ಯೇಕ ಬ್ಯಾಂಕ್​ನ್ನೂ ತೆರೆದಿರೋದಾಗಿ ಹೇಳಿದ್ದಾನೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...