alex Certify ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು: ಶಿವಮೊಗ್ಗದ ಶಿವಮೂರ್ತಿಗೆ ಖುಲಾಯಿಸಿದ ಅದೃಷ್ಟ -24 ಕೋಟಿ ರೂ. ಲಾಟರಿ ಜಾಕ್ ಪಾಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು: ಶಿವಮೊಗ್ಗದ ಶಿವಮೂರ್ತಿಗೆ ಖುಲಾಯಿಸಿದ ಅದೃಷ್ಟ -24 ಕೋಟಿ ರೂ. ಲಾಟರಿ ಜಾಕ್ ಪಾಟ್

 ದುಬೈ: ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅವರಿಗೆ ದುಬೈನಲ್ಲಿ ಲಾಟರಿಯಲ್ಲಿ 24 ಕೋಟಿ ರೂಪಾಯಿ ಬಹುಮಾನ ಬಂದಿದೆ. ದುಡಿಯಲು ಹೋಗಿದ್ದ ಅವರಿಗೆ ಜಾಕ್ ಪಾಟ್ ಹೊಡೆದಿದೆ.

UAE ನಲ್ಲಿ ನೆಲೆಸಿರುವ ಶಿವಮೊಗ್ಗದ ಶಿವಮೂರ್ತಿ 15 ವರ್ಷಗಳಿಂದ ಮೆಕಾನಿಕಲ್ ಇಂಜಿನಿಯರ್ ಆಗಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಟರಿಯಲ್ಲಿ ಬಂದ ಹಣದಲ್ಲಿ ಊರಿನಲ್ಲಿ ಮನೆ ನಿರ್ಮಿಸಿ ಉಳಿದ ಹಣವನ್ನು ಇಬ್ಬರು ಮಕ್ಕಳ ಭವಿಷ್ಯಕ್ಕೆ ಇಡುವುದಾಗಿ ಶಿವಮೂರ್ತಿ ಹೇಳಿದ್ದಾರೆ.

ಶಿವಮೂರ್ತಿ ಪ್ರತಿತಿಂಗಳು ಲಾಟರಿಯನ್ನು ಖರೀದಿಸುತ್ತಿದ್ದರು. ಕಳೆದ ಫೆಬ್ರವರಿಯಲ್ಲಿ ಅವರು ಖರೀದಿಸಿದ್ದ ಎರಡು ಲಾಟರಿ ಟಿಕೆಟ್ ಗಳಲ್ಲಿ ಒಂದು ಅವರ ಅದೃಷ್ಟ ಬದಲಿಸಿದೆ. ಅವರಿಗೆ 12 ಮಿಲಿಯನ್ ದಿರಾಮ್(24 ಕೋಟಿ ರೂ.) ಲಾಟರಿಯಲ್ಲಿ ಬಹುಮಾನ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...