alex Certify ಉತ್ತರಾಖಂಡ್​ನಲ್ಲಿ ಸಾಮೂಹಿಕ ಗೋ ಹತ್ಯೆ ಪ್ರಕರಣ: ತನಿಖೆಗೆ ಜಿಲ್ಲಾಡಳಿತ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಾಖಂಡ್​ನಲ್ಲಿ ಸಾಮೂಹಿಕ ಗೋ ಹತ್ಯೆ ಪ್ರಕರಣ: ತನಿಖೆಗೆ ಜಿಲ್ಲಾಡಳಿತ ಸೂಚನೆ

ಉತ್ತರಾಖಂಡ್​ನ ಬಾಗೇಶ್ವರ ಜಿಲ್ಲೆಯಲ್ಲಿ 18 ಜಾನುವಾರುಗಳನ್ನ ಕಂದಕಕ್ಕೆ ತಳ್ಳಲಾಗಿದ್ದು ಏಳು ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಬಾಗೇಶ್ವರ ಜಿಲ್ಲಾಡಳಿತ ಪ್ರಕರಣ ಸಂಬಂಧ ತನಿಖೆಗೆ ಸೂಚನೆ ನೀಡಿದೆ.

ಈ ವಿಚಾರವಾಗಿ ಮಾತನಾಡಿದ ಕಪ್ಕೋಟ್​ನ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್​ ರಾಕೇಶ್​ ಚಂದ್ರ ತಿವಾರಿ, ಕಂದಕದಲ್ಲಿ ಬಿದ್ದಿದ್ದ 18 ಜಾನುವಾರುಗಳನ್ನ ಎನ್ಡಿಆರ್​ಎಫ್​ ಪಡೆ ಮಂಗಳವಾರ ರಕ್ಷಿಸಿದೆ. ಈ ಹಸುಗಳನ್ನ ಯಾರು ಕಂದಕಕ್ಕೆ ತಳ್ಳಿದ್ದಾರೆ ಅನ್ನೋದ್ರ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ರು.

18 ಹಸುಗಳಲ್ಲಿ 11 ಹಸುಗಳನ್ನ ಎನ್​ಡಿಆರ್​ಎಫ್​ ಪಡೆ ರಕ್ಷಿಸಿದೆ. ರಕ್ಷಣಾ ಕಾರ್ಯಾಚರಣೆಗೂ ಮುನ್ನವೇ 7 ಜಾನುವಾರುಗಳು ಮೃತಪಟ್ಟಿವೆ ಎಂದು ರಾಕೇಶ್​ ಚಂದ್ರ ಹೇಳಿದ್ದಾರೆ.‌

ಬಾಗೇಶ್ವರ ಜಿಲ್ಲೆಯ ಕಪ್ಕೋಟ್​​ನ ಕಲಾಪಣಿ ಗಧೇರಾದ ಕಂದಕದಲ್ಲಿ ಸಿಲುಕಿದ್ದ ಹಸುಗಳನ್ನ ಕೆಲವರು ಪತ್ತೆ ಹಚ್ಚಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...