alex Certify ಕಳುವಾಗಿರುವ ಬಸ್‌ ನಿಲ್ದಾಣ ಹುಡುಕಿಕೊಟ್ಟವರಿಗೆ ಬಹುಮಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳುವಾಗಿರುವ ಬಸ್‌ ನಿಲ್ದಾಣ ಹುಡುಕಿಕೊಟ್ಟವರಿಗೆ ಬಹುಮಾನ

ಸಾರ್ವಜನಿಕ ಆಸ್ತಿಗಳನ್ನು ಉದ್ದೇಶಪೂರಿತವಾಗಿ ಹಾನಿ ಮಾಡುವ ಸಾಕಷ್ಟು ನಿದರ್ಶನಗಳನ್ನು ನಾವು ಕಂಡಿದ್ದೇವೆ. ಆದರೂ ಸಹ ಪುಣೆಯಲ್ಲಿ ನಡೆದಿರುವ ಈ ಘಟನೆ ಎಂಥವರಿಗೂ ಆಶ್ಚರ್ಯ ಮೂಡಿಸುವಂತಿದೆ.

ಇಲ್ಲಿನ BT ಕಾವಾಡೆ ರಸ್ತೆಯಲ್ಲಿರುವ ಬಸ್ ನಿಲ್ದಾಣವೊಂದನ್ನೇ ಕದಿಯಲಾಗಿದೆ…! ಹೌದು, ನೀವು ಓದಿದ್ದು ಸರಿಯಾಗೇ ಇದೆ! ಇಡೀ ಬಸ್ ನಿಲ್ದಾಣವೇ ಕಾಣೆಯಾಗಿದೆ. ಅದೂ ಪೊಲೀಸ್ ಠಾಣೆ ಸಮೀಪದಲ್ಲಿದ್ದರೂ ಈ ಘಟನೆ ನಡೆದಿದೆಯಂತೆ.

ಈ ಬಗ್ಗೆ ಸ್ಥಳೀಯ ನಾಯಕ ಪ್ರಶಾಂತ್‌ ಮ್ಹಾಸ್ಕೆ ಪೋಸ್ಟರ್‌ ಒಂದನ್ನು ಹಾಕಿದ್ದು, ಬಸ್ ನಿಲ್ದಾಣದ ವಿವರಗಳೊಂದಿಗೆ, ಅದನ್ನು ಹುಡುಕಿಕೊಟ್ಟವರಿಗೆ 5000 ರೂ.ಗಳ ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ. ಈ ಪೋಸ್ಟರ್‌ನ ಚಿತ್ರವನ್ನು ಟ್ವಿಟರ್‌ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...