alex Certify ಮಿಡತೆ ಹಾವಳಿ ನಿಯಂತ್ರಣಕ್ಕೆ ರೈತನ ದೇಸಿ ಟೆಕ್ನಿಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಡತೆ ಹಾವಳಿ ನಿಯಂತ್ರಣಕ್ಕೆ ರೈತನ ದೇಸಿ ಟೆಕ್ನಿಕ್…!

ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಹರಿಯಾಣ, ಮಧ್ಯಪ್ರದೇಶ ಸೇರಿ ವಿವಿಧ ರಾಜ್ಯಗಳಲ್ಲಿ ಮಿಡತೆ ದಾಳಿ ಮಾಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಅದನ್ನು ಓಡಿಸಲು ಅಗ್ನಿಶಾಮಕ ದಳ, ವಿಮಾನ ಬಳಕೆ ಹೀಗೆ ವಿವಿಧ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೆ ಇಲ್ಲೊಬ್ಬ ರೈತರು ದೇಸೀ ತಂತ್ರಜ್ಞಾನದ ಮೊರೆ ಹೋಗಿ ಸೈ ಎನಿಸಿಕೊಂಡಿದ್ದಾರೆ.

ರೈತರೊಬ್ಬರು ಹೊಲದ ಮಧ್ಯದಲ್ಲಿ ನಿಲ್ಲಿಸಲಾದ ಕಂಬದ ಮೇಲೆ ‘ಏರ್ ಪ್ಲೇನ್’ ತಂತ್ರಜ್ಞಾನ ಅಳವಡಿಸಿ ಸಮಸ್ಯೆಗೆ ಹುಡುಕುವ ಪ್ರಯತ್ನ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ.

ಗಾಳಿಯ ರಭಸಕ್ಕೆ ಫ್ಯಾನ್ ತಿರುಗಿ, ಅದರ ಆಧಾರದ ಮೇಲೆ ಹಿಂಭಾಗದಲ್ಲಿ ಕಟ್ಟಿದ ಡಬ್ಬ ನಿರಂತರವಾಗಿ ಬಡಿದುಕೊಳ್ಳುತ್ತದೆ. ಈ ಮೂಲಕ ಮಿಡತೆಗಳು ಶಬ್ದಕ್ಕೆ ಹೆದರಿ ಹೊಲದತ್ತ ಬರುವುದಿಲ್ಲ ಎಂಬ ನಂಬಿಕೆ ಆ ರೈತನದ್ದಾಗಿದೆ.

ಉತ್ತರಪ್ರದೇಶದ ಪೊಲೀಸ್ ಅಧಿಕಾರಿ ರಾಹುಲ್ ಶ್ರೀವಾಸ್ತವ್ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡು, ಲೋ ಕಾಸ್ಟ್ ಅವಿಷ್ಕಾರಗಳ ತಾಯಿ ಎಂದು ಶೀರ್ಷಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 27 ದಶ ಲಕ್ಷ ಮಂದಿ ವೀಕ್ಷಿಸಿ ಕಾಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...