alex Certify ಟೀಂ ಇಂಡಿಯಾ ಆಟಗಾರ ಶಿಖರ್​ ಧವನ್​ರನ್ನ ಜಲವಿಹಾರಕ್ಕೆ ಕೊಂಡೊಯ್ದ ಅಂಬಿಗನಿಗೆ ಸಂಕಷ್ಟ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟೀಂ ಇಂಡಿಯಾ ಆಟಗಾರ ಶಿಖರ್​ ಧವನ್​ರನ್ನ ಜಲವಿಹಾರಕ್ಕೆ ಕೊಂಡೊಯ್ದ ಅಂಬಿಗನಿಗೆ ಸಂಕಷ್ಟ..!

ಇತ್ತೀಚಿಗಷ್ಟೇ ವಾರಣಾಸಿಗೆ ಭೇಟಿ ನೀಡಿದ್ದ ಟೀಂ ಇಂಡಿಯಾ ಆಟಗಾರ ಶಿಖರ್​ ಧವನ್​, ಬೋಟ್​ನಲ್ಲಿ ವಿಹಾರ ಮಾಡುತ್ತಾ ಹಕ್ಕಿಗಳಿಗೆ ಧಾನ್ಯಗಳನ್ನ ತಿನ್ನಲು ನೀಡುತ್ತಿರುವ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದರು. ಆದರೆ ಈ ಫೋಟೋ ಇದೀಗ ಅಂಬಿಗನಿಗೆ ಸಂಕಷ್ಟಕ್ಕೆ ಕಾರಣವಾಗಿದೆ.

ಕಾಶಿ ವಿಶ್ವನಾಥ ದೇವಸ್ಥಾನ ಹಾಗೂ ಕಾಲ ಭೈರವ ದೇಗುಲಲ್ಲೆ ಭೇಟಿ ನೀಡಿದ್ದ ಶಿಖರ್​ ಧವನ್​, ಬಳಿಕ ಹಕ್ಕಿಗಳಿಗೆ ಉಣಬಡಿಸೋದ್ರಲ್ಲಿ ಸಂತೋಷವಿದೆ ಎಂದು ಶೀರ್ಷಿಕೆ ನೀಡಿ ಈ ಫೋಟೋವನ್ನ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದರು.

ಈ ವಿಚಾರವಾಗಿ ಮಾತನಾಡಿದ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್​​ ಕೌಶಲ್​ ರಾಜ್​ ಶರ್ಮಾ, ಹಕ್ಕಿ ಜ್ವರ ದೇಶದಲ್ಲಿ ಉಲ್ಬಣಿಸುತ್ತಿರೋದ್ರ ಹಿನ್ನೆಲೆ ಎಲ್ಲಾ ಅಂಬಿಗರಿಗೆ ಒಂದಷ್ಟು ಮಾರ್ಗಸೂಚಿಗಳನ್ನ ನೀಡಿದ್ದೆವು. ಇದರಲ್ಲಿ ಯಾರೂ ಹಕ್ಕಿಗಳಿಗೆ ಏನನ್ನೂ ತಿನಿಸದಂತೆ ನೋಡಿಕೊಳ್ಳಿ ಅಂತಾನೂ ಸೂಚನೆ ನೀಡಿದ್ದೆವು. ಆದರೆ ಈ ನಿಯಮ ಉಲ್ಲಂಘಿಸಿದ ಬೋಟ್​​ಮ್ಯಾನ್​ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಪ್ರವಾಸಿಗರಾಗಿ ಬಂದಿದ್ದ ಶಿಖರ್ ಧವನ್​ ವಿರುದ್ಧ ಯಾವುದೇ ಕ್ರಮ ಜರುಗಿಸಲ್ಲ ಎಂದು ಹೇಳಿದ್ದಾರೆ.

ಹಕ್ಕಿ ಜ್ವರ ಉಲ್ಬಣ ಹಿನ್ನೆಲೆ ಯಾವುದೇ ಪ್ರವಾಸಿಗರು ಹಕ್ಕಿಗಳಿಗೆ ಜಲವಿಹಾರದ ವೇಳೆ ಏನನ್ನೂ ತಿನ್ನಿಸದಂತೆ ನೋಡಿಕೊಳ್ಳೋದು ಅಂಬಿಗರ ಜವಾಬ್ದಾರಿ ಎಂದು ಹೇಳಲಾಗಿದೆ. ಈ ನಿಯಮವನ್ನ ಉಲ್ಲಂಘಿಸಿದ ಅಂಬಿಗನಿಗೆ ಜಿಲ್ಲಾಡಳಿತದಿಂದ ನೋಟಿಸ್​ ನೀಡಲಾಗುತ್ತೆ. ಹಾಗೂ ಆ ಅಂಬಿಗ ನನ್ನ ಲೈಸೆನ್ಸ್ ಯಾಕೆ ಕ್ಯಾನ್ಸಲ್​ ಮಾಡಬಾರದು ಅನ್ನೋದಕ್ಕೆ ಸೂಕ್ತ ಉತ್ತರವನ್ನ ಸಲ್ಲಿಸಬೇಕಾಗುತ್ತೆ.

View this post on Instagram

A post shared by Shikhar Dhawan (@shikhardofficial)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...