alex Certify ರಜನಿಕಾಂತ್ ರಾಜಕೀಯ ಯಶಸ್ಸಿನ ಕುರಿತು ಕುತೂಹಲಕಾರಿ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಜನಿಕಾಂತ್ ರಾಜಕೀಯ ಯಶಸ್ಸಿನ ಕುರಿತು ಕುತೂಹಲಕಾರಿ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿ

ದ್ರಾವಿಡ ಸಂಸ್ಕೃತಿಯನ್ನ ಪ್ರತಿಪಾದಿಸುವ ದಕ್ಷಿಣ ರಾಜ್ಯಗಳಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್​ ರಾಜಕೀಯವಾಗಿ ಯಶಸನ್ನ ಹೊಂದಲ್ಲ ಅಂತಾ ಕಾಂಗ್ರೆಸ್​ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೇ ಕಾಂಗ್ರೆಸ್​ ಕೂಡ ತಮಿಳುನಾಡಿನಲ್ಲಿ ಸ್ವತಂತ್ರ್ಯ ಅಸ್ಥಿತ್ವ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಎಂದಿನಂತೆ ಎಐಎಡಿಎಂಕೆ ಇಲ್ಲವೇ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಳುತ್ತೆ ಅಂತಾನೂ ಪುನರುಚ್ಚರಿಸಿದ್ರು.

ರಜನಿಕಾಂತ್​ ರಾಜಕೀಯದಲ್ಲಿ ಕ್ಲಿಕ್​ ಆಗ್ತಾರೆ ಎಂದು ನನಗನಿಸೋದಿಲ್ಲ. ಏಕೆಂದರೆ ದ್ರಾವಿಡ ಸಂಸ್ಕೃತಿಯ ನೀತಿಗಳು ತಮಿಳುನಾಡಿನ ರಾಜಕಾರಣದಲ್ಲಿ ಯಾವಾಗಲೂ ಸ್ಪಷ್ಟವಾಗಿ ಗೋಚರವಾಗುತ್ತೆ ಎಂದು ಹಲವು ವರ್ಷಗಳ ಹಿಂದೆ ತಮಿಳುನಾಡಿನಲ್ಲಿ ಕಾಂಗ್ರೆಸ್​ ವ್ಯವಹಾರಗಳ ಉಸ್ತುವಾರಿ ವಹಿಸಿದ್ದ ಮೊಯ್ಲಿ ಹೇಳಿದ್ರು.

ತಮಿಳುನಾಡಿನ ಪ್ರಾದೇಶಿಕ ಪಕ್ಷದ ಜೊತೆ ಸಂಬಂಧ ಹೊಂದಿರದ ಯಾವುದೇ ರಾಜಕೀಯ ಪಕ್ಷ ತಮಿಳುನಾಡಿನಲ್ಲಿ ಉದಯವಾಗೋಕೆ ಸಾಧ್ಯವೇ ಇಲ್ಲ. ಅದರಲ್ಲೂ ರಜನಿಕಾಂತ್​ ಹೆಚ್ಚು ಕಡಿಮೆ ಬಿಜೆಪಿ ಆದರ್ಶಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ರಜನಿಕಾಂತ್​ ತಮಿಳುನಾಡಲ್ಲಿ ಅರಳೋಕೆ ಸಾಧ್ಯವಿಲ್ಲ ಅಂತಾನೂ ಅವರು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...