alex Certify ಪಾರಿವಾಳ ಹಾರಲು ಬಿಟ್ಟ ಮಲಸಹೋದರನ ಮೇಲೆ ಮಾರಣಾಂತಿಕ ಹಲ್ಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರಿವಾಳ ಹಾರಲು ಬಿಟ್ಟ ಮಲಸಹೋದರನ ಮೇಲೆ ಮಾರಣಾಂತಿಕ ಹಲ್ಲೆ

Image result for Pune Man Attacks Stepbrother with Axe for Setting His Pigeons Free from a Coop

ಗೂಡಿನಲ್ಲಿದ್ದ ಪಾರಿವಾಳಗಳನ್ನು ಹಾರಲು ಬಿಟ್ಟ ವ್ಯಕ್ತಿಯೊಬ್ಬರನ್ನು ಅವರ ಮಲಸಹೋದರ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಪುಣೆಯ ಚಿಕ್ಲಿ ಪ್ರದೇಶದಲ್ಲಿ ನಡೆದಿದೆ.

ತಮ್ಮ ಮಲತಾಯಿ, ಮಲಸಹೋದರ ಹಾಗೂ ಹಲ್ಲೆ ಮಾಡಲು ಬಂದ ಇನ್ನೂ ಐವರ ವಿರುದ್ಧ ದೂರು ದಾಖಲಿಸಿದ್ದಾರೆ 28 ವರ್ಷದ ಸಾಗರ್‌ ಕಾಂಬ್ಳೆ.

ಸಾಗರ್‌‌ರ ಜೊತೆಯಲ್ಲಿ ಹುಟ್ಟಿದ ಸಹೋದರ ಶ್ರೀಧರ್‌‌ ತಮ್ಮ ಮಲಸಹೋದರ ಸಿದ್ಧೇಶ್ವರ ಕಾಂಬ್ಳೆ ಸಾಕಿದ್ದ ಪಾರಿವಾಳಗಳನ್ನು ಗೂಡಿನಿಂದ ಹಾರಲು ಬಿಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಿದ್ಧೇಶ್ವರ್‌ ಹಾಗೂ ಆತನ ಸಹಚರರು ಸಾಗರ್‌‌‌ ಮೇಲೆ ಕೊಡಲಿಯಿಂದ ದಾಳಿಗೈದಿದ್ದಾರೆ. ಗಾಯಗೊಂಡ ಸಾಗರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿಕೋರರು ನಾಪತ್ತೆಯಾಗಿದ್ದಾರೆ.

RTE ಮೂಲಕ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯುವ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಚಿಕ್ಲಿ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಸಾಗರ್‌ ಸದ್ಯಕ್ಕೆ ಅಪಾಯದಿಂದ ಪಾರಾಗಿದ್ದು, ಪರಾರಿಯಾದವರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...