alex Certify BIG NEWS: ಆರೋಗ್ಯ ಸೇತು ಆಪ್ ಬಳಕೆ, 4 ಲಕ್ಷ ರೂ. ಬಹುಮಾನ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆರೋಗ್ಯ ಸೇತು ಆಪ್ ಬಳಕೆ, 4 ಲಕ್ಷ ರೂ. ಬಹುಮಾನ ಘೋಷಣೆ

ನವದೆಹಲಿ: ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಬಳಕೆಯಲ್ಲಿರುವ ಆರೋಗ್ಯ ಸೇತು ಆಪ್ ನಲ್ಲಿನ ದೋಷಗಳನ್ನು ಗುರುತಿಸುವವರೊಗೆ 4 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು.

ಅರೋಗ್ಯ ಸೇತು ಆಪ್ ನಲ್ಲಿನ ಬಗ್ಸ್(ದೋಷ)ಗಳನ್ನು ಗುರುತಿಸಿದರೆ ಇಲ್ಲವೇ ಆಪ್ ಸುಧಾರಣೆಗೆ ಮಹತ್ವದ ಸಲಹೆ ನೀಡುವವರಿಗೆ 4 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜೂನ್ 26 ರ ವರೆಗೆ ಆರೋಗ್ಯ ಸೇತು ಆಪ್ ದೋಷ ಪತ್ತೆ ಯೋಜನೆ ಬಳಕೆದಾರರು, ಟೆಕ್ಕಿಗಳು, ಸೈಬರ್ ತಜ್ಞರು, ಸಂಶೋಧಕರು ಸೇರಿದಂತೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ https://innovate.mygov.in/  ಭೇಟಿ ನೀಡಬಹುದಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...