ನವದೆಹಲಿ: ಕೊರೊನಾ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಬಳಕೆಯಲ್ಲಿರುವ ಆರೋಗ್ಯ ಸೇತು ಆಪ್ ನಲ್ಲಿನ ದೋಷಗಳನ್ನು ಗುರುತಿಸುವವರೊಗೆ 4 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು.
ಅರೋಗ್ಯ ಸೇತು ಆಪ್ ನಲ್ಲಿನ ಬಗ್ಸ್(ದೋಷ)ಗಳನ್ನು ಗುರುತಿಸಿದರೆ ಇಲ್ಲವೇ ಆಪ್ ಸುಧಾರಣೆಗೆ ಮಹತ್ವದ ಸಲಹೆ ನೀಡುವವರಿಗೆ 4 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಜೂನ್ 26 ರ ವರೆಗೆ ಆರೋಗ್ಯ ಸೇತು ಆಪ್ ದೋಷ ಪತ್ತೆ ಯೋಜನೆ ಬಳಕೆದಾರರು, ಟೆಕ್ಕಿಗಳು, ಸೈಬರ್ ತಜ್ಞರು, ಸಂಶೋಧಕರು ಸೇರಿದಂತೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಹೆಚ್ಚಿನ ಮಾಹಿತಿಗೆ https://innovate.mygov.in/ ಭೇಟಿ ನೀಡಬಹುದಾಗಿದೆ ಎಂದು ಹೇಳಲಾಗಿದೆ.