alex Certify ಕೊರೊನಾ ಲಸಿಕೆಯನ್ನ ಮೊದಲು ಪ್ರಧಾನಿಯೇ ಸ್ವೀಕರಿಸಲಿ ಎಂದ ಲಾಲೂ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆಯನ್ನ ಮೊದಲು ಪ್ರಧಾನಿಯೇ ಸ್ವೀಕರಿಸಲಿ ಎಂದ ಲಾಲೂ ಪುತ್ರ

ಪ್ರಧಾನಿ ನರೇಂದ್ರ ಮೋದಿ ಮೊದಲು ಕೊರೊನಾ ವೈರಸ್​ ಲಸಿಕೆ ಸ್ವೀಕಾರ ಮಾಡಬೇಕು ಅಂತಾ ಆರ್.ಜೆ.ಡಿ. ನಾಯಕ ತೇಜ್​ ಪ್ರತಾಪ್​ ಯಾದವ್​ ಆಗ್ರಹಿಸಿದ್ದಾರೆ.

ದೇಶದಲ್ಲಿ ತುರ್ತು ಅನುಮೋದನೆಗೊಂಡಿರುವ ಕೊರೊನಾ ಲಸಿಕೆಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ ತೇಜ್​ ಪ್ರತಾಪ್​ ಯಾದವ್​ ಈ ಹೇಳಿಕೆಯನ್ನ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೊದಲು ಕೋವಿಡ್​ ಲಸಿಕೆ ತೆಗೆದುಕೊಳ್ಳಲಿ, ಅದಾದ ಬಳಿಕ ನಾವೆಲ್ಲ ಕೊರೊನಾ ಲಸಿಕೆ ಸ್ವೀಕಾರ ಮಾಡೋಕೆ ಸಿದ್ಧ ಅಂತಾ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್​ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ ಹೇಳಿದ್ದಾರೆ.

ಕಳೆದ ವಾರ ಭಾರತದ ಡ್ರಗ್​ ಕಂಟ್ರೋಲರ್​ ಜನರಲ್,​ ದೇಶದಲ್ಲಿ ಸೇರಮ್​ ಇನ್ಸ್​ಟಿಟ್ಯೂಟ್​ಗೆ ಸೇರಿದ ಕೋವಿಶೀಲ್ಡ್ ಹಾಗೂ ಭಾರತ್​ ಬಯೋಟೆಕ್​ ನಿರ್ಮಿತ ಕೋ ವ್ಯಾಕ್ಸಿನ್​ ಬಳಕೆಗೆ ತುರ್ತು ಅನುಮೋದನೆ ನೀಡಿತ್ತು.

ಕೇಂದ್ರದ ಮಾರ್ಗಸೂಚಿಯಂತೆ ಕೊರೊನಾ ಲಸಿಕೆ ವಿತರಣೆ ಮಾಡೋಕೆ ಬಿಹಾರ ಸಂಪೂರ್ಣ ಸಜ್ಜಾಗಿದೆ ಎಂದು ಸಿಎಂ ನಿತೀಶ್​ ಕುಮಾರ್​ ಹೇಳಿಕೆ ನೀಡಿದ ಬೆನ್ನಲ್ಲೇ ತೇಜ್​ ಪ್ರತಾಪ್​ ಯಾದವ್​ ಈ ರೀತಿಯ ಹೇಳಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...