alex Certify ಸಹೋದರನ ವಿರೋಧದ ನಡುವೆಯೂ ಅತ್ತಿಗೆಯೊಂದಿಗೆ ಸಂಬಂಧ ಬೆಳೆಸಿದ ಮೈದುನ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರನ ವಿರೋಧದ ನಡುವೆಯೂ ಅತ್ತಿಗೆಯೊಂದಿಗೆ ಸಂಬಂಧ ಬೆಳೆಸಿದ ಮೈದುನ ಸಾವು

ಭುವನೇಶ್ವರ: ಒಡಿಶಾದ ಕಿಯೋಂಜರ್ ಜಿಲ್ಲೆಯ ಟೆಲ್ಕೋಯಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರ ಎಂಬಲ್ಲಿ ಅಣ್ಣನೇ ತಮ್ಮನನ್ನು ಬಾಣಬಿಟ್ಟು ಕೊಲೆ ಮಾಡಿದ್ದಾನೆ.

ಜಿತು ಮುಂಡಾ ಕೊಲೆಯಾದ ವ್ಯಕ್ತಿ. ಈತ ತನ್ನ ದೊಡ್ಡಪ್ಪನ ಮಗ ಶಂಕರ್ ಮುಂಡಾ ಎಂಬುವನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಅತ್ತಿಗೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಜಿತು ಮುಂಡಾಗೆ ಹಲವು ಬಾರಿ ಶಂಕರ್ ಮುಂಡಾ ಎಚ್ಚರಿಕೆ ನೀಡಿದ್ದ.

ಆದರೆ, ಅಣ್ಣನ ಎಚ್ಚರಿಕೆ ನಂತರವೂ ಜಿತು ಮುಂಡಾ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಅಲ್ಲದೇ, ಅತ್ತಿಗೆಯನ್ನು ಪತ್ನಿಯಾಗಿ ಸ್ವೀಕರಿಸಲು 15 ದಿನಗಳ ಹಿಂದೆ ತನ್ನ ಮನೆಯಲ್ಲಿಯೇ ಇಟ್ಟುಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಶಂಕರ್ ಶುಕ್ರವಾರ ಬಿಲ್ಲು ಬಾಣ ತೆಗೆದುಕೊಂಡು ಹೋಗಿ ಜಿತುವಿನ ಎದೆಗೆ ಬಾಣಬಿಟ್ಟು ಕೊಲೆ ಮಾಡಿದ್ದಾನೆ. ನಂತರ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...