alex Certify 20 ರೂಪಾಯಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ರೂಪಾಯಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!

ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ 26 ವರ್ಷದ ವ್ಯಕ್ತಿಯನ್ನ ಮೂವರು ಅಪರಿಚಿತ ಗ್ರಾಹಕರು ಕೊಲೆಗೈದ ಘಟನೆ ಥಾಣೆಯ ಮೀರಾ ರಸ್ತೆಯಲ್ಲಿ ಸಂಭವಿಸಿದೆ. 20 ರೂಪಾಯಿ ಬಾಕಿ ಮೊತ್ತ ನೀಡಿಲ್ಲ ಎಂಬ ಕಾರಣಕ್ಕೆ ಶುರುವಾದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಯಾದ ವ್ಯಕ್ತಿಯನ್ನ ವೀರೇಂದ್ರ ಯಾದವ್​ ಎಂದು ಗುರುತಿಸಲಾಗಿದೆ. ಮೂವರು ಗ್ರಾಹಕರು ಶುಕ್ರವಾರ ವೀರೇಂದ್ರನ ಅಂಗಡಿಗೆ ಬಂದು 20 ರೂಪಾಯಿ ಬಾಕಿ ಕೊಡೋದಿದೆ ಎಂದು ಹೇಳಿದ್ದಾರೆ. ಇದರಿಂದ ಗ್ರಾಹಕರು ಹಾಗೂ ವೀರೇಂದ್ರ ನಡುವಿನ ವಾಗ್ವಾದ ತಾರಕಕ್ಕೆ ಏರಿದೆ.

ಮೂವರು ಸೇರಿ ವಿರೇಂದ್ರನನ್ನ ತಳ್ಳಿದ್ದಾರೆ. ನೆಲಕ್ಕೆ ಬಿದ್ದ ವೀರೇಂದ್ರನ ತಲೆ ಪೆಟ್ಟಾಗಿದ್ದು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.

ಮೂವರು ಗ್ರಾಹಕರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು ಪರಾರಿಯಾದ ಆರೋಪಿಗಳಿಗಾಗಿ ನಯಾನಗರ ಠಾಣೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...