alex Certify ಬಾವಿಯಲ್ಲಿ 9 ಮೃತದೇಹ ಕಂಡು ಬೆಚ್ಚಿ ಬಿದ್ದ ಜನ, ವಲಸೆ ಕಾರ್ಮಿಕರ ದುರಂತ ಸಾವಿಗೆ ಕಾರಣ ನಿಗೂಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾವಿಯಲ್ಲಿ 9 ಮೃತದೇಹ ಕಂಡು ಬೆಚ್ಚಿ ಬಿದ್ದ ಜನ, ವಲಸೆ ಕಾರ್ಮಿಕರ ದುರಂತ ಸಾವಿಗೆ ಕಾರಣ ನಿಗೂಢ

ಹೈದರಾಬಾದ್: ತೆಲಂಗಾಣದ ವಾರಂಗಲ್ ಜಿಲ್ಲೆಯ ಗೊರೆಕುಂಟ ಗ್ರಾಮದಲ್ಲಿ ಒಂದೇ ಬಾವಿಯಲ್ಲಿ 9 ಮಂದಿಯ ಮೃತದೇಹಗಳು ಪತ್ತೆಯಾಗಿವೆ.

ಗುರುವಾರ ನಾಲ್ವರ ಮೃತದೇಹಗಳನ್ನು ಪೊಲೀಸರು ಹೊರ ತೆಗೆದಿದ್ದು, ಶುಕ್ರವಾರ ಮತ್ತೊಂದು ಮೃತ ದೇಹ ಕಂಡು ಬಂದಿದೆ. ಬಾವಿಯಲ್ಲಿದ್ದ ನೀರನ್ನು ಸಂಪೂರ್ಣ ಹೊರಹಾಕಿದಾಗ ಮತ್ತೆ ನಾಲ್ಕು ಮೃತ ದೇಹಗಳು ಕಂಡು ಬಂದಿವೆ. ಒಂದೇ ಬಾವಿಯಿಂದ 9 ಮೃತ ದೇಹಗಳು ಕಂಡು ಬಂದಿರುವುದು ಸುತ್ತಮುತ್ತಲಿನ ಜನರನ್ನು ಬೆಚ್ಚಿ ಬೀಳಿಸಿದೆ.

ಮೃತರಲ್ಲಿ ಒಂದೇ ಕುಟುಂಬದ ಆರು ಮಂದಿ ಇದ್ದು ಇವರು ಪಶ್ಚಿಮಬಂಗಾಳ ಮೂಲದವರಾಗಿದ್ದಾರೆ. ಉಳಿದವರು ಬಿಹಾರ ಮೂಲದವರಾಗಿದ್ದಾರೆ. ಇವರೆಲ್ಲರೂ ಸಮೀಪದ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದು ವಾರಂಗಲ್ ನಗರದ ಕರೀಮ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಲಾಕ್ಡೌನ್ ಜಾರಿಯಾಗಿದ್ದರಿಂದ ಕಾರ್ಖಾನೆ ಸಮೀಪದಲ್ಲಿ ಗೋಡೋನ್ ನಲ್ಲೇ ಉಳಿದುಕೊಂಡಿದ್ದರು. ಲಾಕ್ ಡೌನ್ ಮುಂದುವರೆದ ಕಾರಣ ಅವರಿಗೆ ಬಾಡಿಗೆ ಮನೆಗಳಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಎಲ್ಲಾ ಕಾರ್ಮಿಕರು ಇದ್ದಕ್ಕಿದ್ದಂತೆ ನಾಪತ್ತೆಯಾದ ಬಗ್ಗೆ ಕಾರ್ಖಾನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಸಮೀಪದ ಬಾವಿಯಲ್ಲಿ ಮೃತದೇಹಗಳು ಕಂಡು ಬಂದಿವೆ. ಎಲ್ಲರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಬಂದ ನಂತರ ಸಾವಿನ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...