alex Certify ಜಡ್ಜ್​​ ತೀರ್ಪು ಪ್ರಕಟಿಸುತ್ತಿರುವಾಗಲೇ ಕಟಕಟೆಯಿಂದ ಕೈದಿ ಎಸ್ಕೇಪ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಡ್ಜ್​​ ತೀರ್ಪು ಪ್ರಕಟಿಸುತ್ತಿರುವಾಗಲೇ ಕಟಕಟೆಯಿಂದ ಕೈದಿ ಎಸ್ಕೇಪ್​…!

ಮಧ್ಯ ಪ್ರದೇಶದ ರಾಜಗಢ ಜಿಲ್ಲೆಯ ಕೋರ್ಟ್​ನಲ್ಲಿ ನ್ಯಾಯಾಧೀಶರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಓರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದರು. ಶಿಕ್ಷೆ ಪ್ರಮಾಣವನ್ನ ಕೇಳಿದ ಅಪರಾಧಿ ಒಮ್ಮೆ ಆಘಾತಕ್ಕೆ ಒಳಗಾಗಿದ್ದ.

ಇದರ ಬಳಿಕ ಸಿಕ್ಕ ಅವಕಾಶವನ್ನ ಬಳಸಿಕೊಂಡ ಕೈದಿ ಜೀತೇಂದ್ರ ಭೀಲ್​ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಕೋರ್ಟ್​ನಿಂದ ಕಾಲ್ಕಿತ್ತಿದ್ದಾನೆ. ಈ ಘಟನೆ ಬಳಿಕ ರಾಜಗಢ ಎಸ್ಪಿ ಪ್ರದೀಪ್​ ಶರ್ಮಾ ಸೇರಿದಂತೆ ಅನೇಕ ಪೊಲೀಸರು ಕೈದಿ ಪತ್ತೆಗಾಗಿ ಕಿಲೋಮೀಟರ್​ಗಟ್ಟಲೇ ದೂರ ಹೋಗಿ ನೋಡಿದ್ರೂ ಸಹ ಕೈದಿಯ ಸುಳಿವು ಸಿಕ್ಕಿಲ್ಲ.

ಅತ್ಯಾಚಾರ ಕೇಸ್​ನಡಿಯಲ್ಲಿ ಜೈಲು ಸೇರಿದ್ದ ಜೀತೇಂದ್ರನಿಗೆ ಕೋರ್ಟ್ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಶಿಕ್ಷೆಯನ್ನ ಕೇಳುತ್ತಿದ್ದಂತೆಯೇ ಅಪರಾಧಿ ಕೋರ್ಟ್ ಸಿಬ್ಬಂದಿಗೆ ಡಿಕ್ಕಿ ಹೊಡೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಪೊಲೀಸರು ಜೀತೇಂದ್ರನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. 2 ವರ್ಷಗಳ ಹಿಂದೆ ಜೀತೇಂದ್ರ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರಗೈದಿದ್ದ. ಈ ಬಾಲಕಿ ಗರ್ಭಿಣಿ ಕೂಡ ಆಗಿದ್ದಳು. ಕುಟುಂಬಸ್ಥರು ಕೇಳಿದ ಬಳಿಕ ಬಾಲಕಿ ಜೀತೇಂದ್ರನ ಹೆಸರನ್ನ ಹೇಳಿದ್ದಳು. ಇದಾದ ಬಳಿಕ ಸಂತ್ರಸ್ಥೆ ಕುಟುಂಬಸ್ಥರು ಜೀತೇಂದ್ರನ ವಿರುದ್ಧ ದೂರು ದಾಖಲಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...