alex Certify ‘ಮದ್ಯ’ ಮಾರಾಟದ ಬಗ್ಗೆ ಸರ್ಕಾರ ತೆಗೆದುಕೊಂಡಿದೆ ಈ ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮದ್ಯ’ ಮಾರಾಟದ ಬಗ್ಗೆ ಸರ್ಕಾರ ತೆಗೆದುಕೊಂಡಿದೆ ಈ ನಿರ್ಧಾರ

ಲಾಕ್ ಡೌನ್ ಮಧ್ಯೆ ಹಸಿರು ವಲಯದ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಕೆಲ ರಿಯಾಯಿತಿ ನೀಡಿದೆ. ಅಗತ್ಯ ವಸ್ತುಗಳ ಜೊತೆ ಸರ್ಕಾರಿ ಮಳಿಗೆಯಲ್ಲಿರುವ ಅತ್ಯಗತ್ಯವಲ್ಲದ ವಸ್ತುಗಳ ಅಂಗಡಿಗಳು ಇಂದಿನಿಂದ ಬಾಗಿಲು ತೆರೆಯಲಿವೆ. ಈ ಷರತ್ತು ಬದ್ಧ ವಿನಾಯಿತಿ ಜನರಲ್ಲಿ ಸ್ವಲ್ಪ ನೆಮ್ಮದಿ ಮೂಡಿಸಿದೆ. ಆದ್ರೆ ಮದ್ಯ ಪ್ರಿಯರಿಗೆ ಮಾತ್ರ ನೆಮ್ಮದಿ ಸುದ್ದಿ ಸಿಕ್ಕಿಲ್ಲ.

ಮದ್ಯವನ್ನು ಸರ್ಕಾರ ಬೇರೆ ವರ್ಗದಲ್ಲಿ ಸೇರಿಸಿದೆ. ಹಾಗಾಗಿ ಎರಡನೇ ಹಂತದ ವಿನಾಯಿತಿಯಲ್ಲಿ ಮದ್ಯದಂಗಡಿ ಬರುವುದಿಲ್ಲ. ಮದ್ಯದಂಗಡಿ ಬಾಗಿಲು ತೆರೆಯುವುದನ್ನೇ ಕಾದು ಕುಳಿತಿರುವ ಮದ್ಯಪ್ರಿಯರಿಗೆ ಗೃಹ ಸಚಿವಾಲಯ ಖುಷಿ ಸುದ್ದಿ ನೀಡಿಲ್ಲ. ಮಾಲ್, ಥಿಯೇಟರ್ ಸೇರಿದಂತೆ ಸರ್ಕಾರಿ ಮಳಿಗೆಯಲ್ಲಿ ಬರದ ಅನಗತ್ಯ ವಸ್ತುಗಳ ಅಂಗಡಿಗಳು ಕೂಡ ಬಾಗಿಲು ತೆರೆಯುವಂತಿಲ್ಲ.

ಮೇ 3 ರ ನಂತ್ರವಾದ್ರೂ ಮದ್ಯ ಮಾರಾಟಕ್ಕೆ ಅನುಮತಿ ಸಿಗಲಿದ್ಯಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಲಾಕ್ ಡೌನ್ ಮೇ 3ಕ್ಕೆ ಮುಗಿಯಲಿದ್ದು, ಅಂದು ಸರ್ಕಾರ ಯಾವ ಘೋಷಣೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...