alex Certify ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂದು ನಂಬಿಸಿ 50 ಲಕ್ಷ ರೂ. ಪೀಕಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂದು ನಂಬಿಸಿ 50 ಲಕ್ಷ ರೂ. ಪೀಕಿದ ಭೂಪ..!

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂಬ ನಂಬಿಗಸ್ಥನ ಮಾತನ್ನ ನಂಬಿದ ಆಭರಣ ಅಂಗಡಿ ಮಾಲೀಕನೊಬ್ಬ ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಪುಣೆಯ ಹದಾಸ್​ಪುರದಲ್ಲಿ ನಡೆದಿದೆ.

ಜ್ಯುವೆಲರಿ ಅಂಗಡಿ ಮಾಲೀಕ ಅನೇಕ ವರ್ಷಗಳಿಂದ ನಂಬುತ್ತಿದ್ದ ವ್ಯಕ್ತಿಯಿಂದ 50 ಲಕ್ಷ ರೂಪಾಯಿ ನೀಡಿ ಮ್ಯಾಜಿಕ್​ ಮರಳನ್ನ ಖರೀದಿಸಿದ್ದ ಎನ್ನಲಾಗಿದೆ. ಈತ ಈ ಮ್ಯಾಜಿಕ್​ ಮರಳು ಬಂಗಾಳದಿಂದ ತರಿಸಿದ್ದು ಎಂದೂ ಇದನ್ನ ಕಾಯಿಸಿದ್ರೆ ಚಿನ್ನವಾಗಿ ಬದಲಾಗುತ್ತದೆಯೆಂದೂ ಜ್ಯುವೆಲ್ಲರಿ ಶಾಪ್​ ಮಾಲೀಕನನ್ನ ನಂಬಿಸಿದ್ದ ಎನ್ನಲಾಗಿದೆ.

ಬಹಳ ವರ್ಷಗಳ ಹಿಂದೆ ಈತನ ಚಿನ್ನದ ಅಂಗಡಿ ಭೇಟಿ ನೀಡಿದ್ದ ಆರೋಪಿ ಕಾಲ ಕ್ರಮೇಣ ಆಭರಣ ಅಂಗಡಿ ಮಾಲೀಕನ ಸ್ನೇಹವನ್ನ ಸಂಪಾದಿಸಿದ್ದ ಎನ್ನಲಾಗಿದೆ.

ಜ್ಯುವೆಲ್ಲರಿ ಶಾಪ್​ ಮಾಲೀಕನಿಗೆ 4 ಕೆಜಿ ಮರಳನ್ನ ನೀಡಿದ ಈತ ತಾನು ಇದನ್ನ ಪಶ್ಚಿಮ ಬಂಗಾಳದಿಂದ ತಂದಿರೋದಾಗಿ ಹೇಳಿದ್ದ. ಮಾತ್ರವಲ್ಲದೇ ಇದನ್ನ ಬಿಸಿ ಮಾಡಿದ್ರೆ ಚಿನ್ನವಾಗುತ್ತೆ ಎಂದು ನಂಬಿಸಿದ್ದ. ಈತನ ಮಾತನ್ನ ನಂಬಿದ್ದ ಸಂತ್ರಸ್ತ 30 ಲಕ್ಷ ರೂಪಾಯಿ ನಗದು ಹಾಗೂ 20 ಲಕ್ಷ ರೂ. ಮೌಲ್ಯದ ಚಿನ್ನವನ್ನ ನೀಡಿದ್ದ ಎನ್ನಲಾಗಿದೆ. ಆರೋಪಿಯ ವಿರುದ್ಧ ಸೆಕ್ಷನ್​ 420, 406 ಹಾಗೂ 34ರಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...