alex Certify ಬಾಲಿವುಡ್​ ನಟ ಅಜಯ್​ದೇವಗನ್​ಗೆ ನಡು ರಸ್ತೆಯಲ್ಲೇ ಧಮ್ಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಿವುಡ್​ ನಟ ಅಜಯ್​ದೇವಗನ್​ಗೆ ನಡು ರಸ್ತೆಯಲ್ಲೇ ಧಮ್ಕಿ….!

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ವಿಚಾರವಾಗಿ ಪಾಪ್​ ತಾರೆ ರಿಹನ್ನಾ ಟ್ವೀಟ್​ ಮಾಡುತ್ತಿದ್ದಂತೆಯೇ ಪ್ರತಿಭಟನೆ ಬೇರೆ ದಿಕ್ಕಿಗೇ ವಾಲಿದೆ. ಇಷ್ಟು ದಿನ ತುಟಿ ಬಿಚ್ಚದೇ ಸುಮ್ಮನ್ನಿದ್ದ ಭಾರತೀಯ ಸೆಲೆಬ್ರಿಟಿಗಳು ದೇಶ ಒಂದು ಎಂಬ ಸಂದೇಶ ಸಾರಿದ್ದಾರೆ. ಈ ಸಾಲಿಗೆ ಬಾಲಿವುಡ್​ ನಟ ಅಜಯ್​ ದೇವಗನ್​ ಕೂಡ ಒಬ್ಬರು. ಇದೇ ವಿಚಾರವಾಗಿ ಕೋಪಗೊಂಡಿದ್ದ ವ್ಯಕ್ತಿಯೊಬ್ಬ 15 ನಿಮಿಷಗಳ ಕಾಲ ಮುಂಬೈನಲ್ಲಿ ಅಜಯ್​ ದೇವಗನ್​ರ ಕಾರನ್ನ ತಡೆದಿದ್ದಾನ.

ವೈರಲ್​ ಆಗಿರುವ ವಿಡಿಯೋದಲ್ಲಿ ಕಾರಿಗೆ ತಡೆ ನೀಡಿದ ವ್ಯಕ್ತಿ ಅಜಯ್​ ದೇವಗನ್​ ಪಂಜಾಬ್​ ವಿರೋಧಿಯಾಗಿದ್ದಾರೆ ಎಂದು ಹೇಳೋದನ್ನ ಕೇಳಬಹುದಾಗಿದೆ. ಬಿಎಂಡಬ್ಲೂ ಕಾರಿನ ಮುಂಬದಿ ಸೀಟಿನಲ್ಲಿ ಕುಳಿತಿದ್ದ ಅಜಯ್​ ದೇವಗನ್​ ಕೆಲಕಾಲ ಕಸಿವಿಸಿಗೊಳಗಾಗಿದ್ದಾರೆ. ಗೊರೆಗಾಂವ್​ನ ಫಿಲಂಸಿಟಿ ಮುಂಭಾಗದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ.

ಈ ವ್ಯಕ್ತಿ ಪಂಜಾಬ್​ಗೆ ವಿರೋಧಿಯಾಗಿದ್ದಾರೆ. ಪಂಜಾಬ್​ ಇವರಿಗೆ ಅನ್ನ ನೀಡಿದೆ. ಅದು ಹೇಗೆ ತಿಂದಿದ್ದು ಜೀರ್ಣವಾಗುತ್ತೆ..? ನೀವು ಹೇಗೆ ಪಂಜಾಬ್​ ವಿರೋಧಿ ಆಗೋಕೆ ಸಾಧ್ಯ..? ನಿಮಗೆ ನಾಚಿಕೆಯಾಗಬೇಕು. ನೀವೇಕೆ ಕಾರಿನಿಂದ ಇಳಿದು ಬಂದು ನನ್ನೊಂದಿಗೆ ಮಾತನಾಡಬಾರದು ಎಂದು ಪ್ರಶ್ನೆ ಮಾಡಿದ್ದಾನೆ.
ಅಜಯ್​ ದೇವಗನ್​ ಜೊತೆಗಿದ್ದ ಭದ್ರಾ ಸಿಬ್ಬಂದಿ ಆ ವ್ಯಕ್ತಿಯೊಂದಿಗೆ ಮಾತನಾಡಲು ಯತ್ನಿಸಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...