alex Certify ತಮಾಷೆಗೆಂದು ಸ್ನೇಹಿತನ ಗುದದ್ವಾರಕ್ಕೆ ಗಾಳಿ ತುಂಬಲು ಹೋಗಿ ಜೀವಕ್ಕೇ ಸಂಚಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಾಷೆಗೆಂದು ಸ್ನೇಹಿತನ ಗುದದ್ವಾರಕ್ಕೆ ಗಾಳಿ ತುಂಬಲು ಹೋಗಿ ಜೀವಕ್ಕೇ ಸಂಚಕಾರ..!

ಕೆಲವೊಮ್ಮೆ ತಮಾಷೆ ವಿಚಾರಗಳು ಮನುಷ್ಯನ ಜೀವಕ್ಕೇ ಅಪಾಯ ತಂದೊಡ್ಡಬಹುದು. ಇದೇ ಮಾತಿಗೆ ಉದಾಹರಣೆ ಎಂಬಂತೆ ಮಧ್ಯ ಪ್ರದೇಶದ ಕಟ್ನಿ ಎಂಬಲ್ಲಿ ಸ್ನೇಹಿತನೊಬ್ಬ ತನ್ನ ಗೆಳೆಯನ ಆಂತರಿಕ ಅಂಗಕ್ಕೆ ಧಾನ್ಯಗಳನ್ನ ಒಣಗಿಸುವ ಪಂಪ್​ನಿಂದ ಗಾಳಿಯನ್ನ ತುಂಬಿದ ಕಾರಣ ಆತ ಐಸಿಯುಗೆ ದಾಖಲಾಗಿದ್ದಾನೆ.

ಮಿಲ್​​ನಲ್ಲಿ ಕೆಲಸ ಮಾಡುತ್ತಿದ್ದ ವಿನೋದ್​ ಠಾಕೂರ್​ ಹಾಗೂ ಸುಖ್ರಮ್​ ಯಾದವ್​ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಸುಖ್ರಮ್​ ಯಾದವ್​ ಗುದದ್ವಾರಕ್ಕೆ ಧಾನ್ಯವನ್ನ ಒಣಗಿಸಲು ಬಳಸುವ ಪಂಪ್​ನ ನಳಿಕೆಯನ್ನ ಹಾಕಿದ ವಿನೋದ್ ಠಾಕೂರ್​ ಗಾಳಿ ಹೋಗುವಂತೆ ಮಾಡಿದ್ದಾನೆ. ಇದರಿಂದ ಸುಖ್ರಮ್​ ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡಿದ್ದು ಆತನ ಖಾಸಗಿ ಅಂಗಗಳಿಗೆ ಹಾನಿ ಉಂಟಾಗಿದೆ.

ಸುಖ್ರಮ್​ ಸ್ಥಿತಿ ಗಂಭೀರವಾಗಿದ್ದು ಐಸಿಯುಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಮಾಧವ್​ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವಿನೋದ್​ ಠಾಕೂರ್​ನನ್ನ ಬಂಧಿಸಲಾಗಿದೆ. ತಮಾಷೆಗೆಂದು ಮಾಡಲು ಹೋದ ಈ ಕೆಲಸ ಇದೀಗ ಸ್ನೇಹಿತನ ಜೀವಕ್ಕೇ ಅಪಾಯ ತಂದೊಡ್ಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...