ತಮಿಳುನಾಡಿನ ನೀಲಗಿರಿ ಅರಣ್ಯ ಪ್ರದೇಶದಲ್ಲಿ ಗುಂಡಿಯೊಂದರಲ್ಲಿ ಸಿಕ್ಕಿಬಿದ್ದಿದ್ದ ಕರಡಿಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಫಲರಾಗಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪರ್ವೀನ್ ಕಾಸ್ವನ್ ಹಂಚಿಕೊಂಡಿದ್ದಾರೆ.
ಗುಂಡಿಯಲ್ಲಿ ಸಿಲುಕಿದ್ದ ಕರಡಿಯು ಅಲ್ಲಿಂದ ಮೇಲೆ ಬರಲು ನಾಲ್ಕೂ ಮೂಲೆಗಳಲ್ಲಿ ತಿಣುಕಾಡಿಬಿಟ್ಟಿತ್ತು. ಗೋಡೆಗಳನ್ನು ಹತ್ತಿಕೊಂಡು ಮೇಲಕ್ಕೆ ಬರಲು ಮಾಡಿದ ಯತ್ನಗಳೆಲ್ಲಾ ಪದೇ ಪದೇ ವಿಫಲವಾಗಿಬಿಡುತ್ತಿದ್ದವು.
ಈ ವಿಚಾರ ತಿಳಿದುಕೊಂಡ ಅರಣ್ಯಾಧಿಕಾರಿಗಳು ಏಣಿಯೊಂದನ್ನು ತೆಗೆದುಕೊಂಡ ಜಾಂಬವಂತನ ನೆರವಿಗೆ ನಿಂತಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಸಂಜೆಯಾಗಿದ್ದ ಕಾರಣ ಆ ವೇಳೆ ಪಂಜುಗಳನ್ನು ಹಿಡಿದು ನಿಂತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಭಾರೀ ಹರಸಾಹಸ ಪಟ್ಟಿದ್ದಾರೆ. ಏಣಿ ಏರಿಕೊಂಡು ಬಂದ ಕರಡಿ, ಆಮೇಲೆ ಕಾಡಿನ ಒಳಗೆ ಮರೆಯಾಗಿಬಿಟ್ಟಿದೆ.